ಮಧ್ಯಮ ವ್ಯಾಪ್ತಿಯ ‘ಅಗ್ನಿ-4’ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ.
ಇದನ್ನು ಓದಿ –ಜೂ.13ರಿಂದ ಎರಡು ದಿನ ರಾಷ್ಟ್ರಪತಿ ಕೋವಿಂದ್ ಕರ್ನಾಟಕ ಭೇಟಿ
ಈ ಮೂಲಕ ಭಾರತ ಸೇನೆಗೆ ಮತ್ತಷ್ಟು ಬಲ ಬಂದಿದೆ . 4000 ಕಿ.ಮೀ. ದೂರದಿಂದಲೇ ಶತ್ರುಪಡೆಗಳಿಗೆ ಗುರಿ ಇಡಬಹುದಾಗಿದೆ. ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ರಾತ್ರಿ 7.30ರ ಸುಮಾರಿಗೆ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.
ಅಗ್ನಿ-IV ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯು ದೇಶದ ಸೇನಾ ಸಾಮರ್ಥ್ಯದ ಗಮನಾರ್ಹ ಹೆಚ್ಚಳದ ಸಂಕೇತವಾಗಿದೆ ಎಂದು ರಕ್ಷಣಾ ಸಚಿವಾಲಯ ಬಣ್ಣಿಸಿದೆ.
ಅಗ್ನಿ-4 ರ ಯಶಸ್ವಿ ಪರೀಕ್ಷೆಯು ಭಾರತದ ‘ವಿಶ್ವಾಸಾರ್ಹ ಕನಿಷ್ಠ ತಡೆ’ ನೀತಿಯನ್ನು ಪುನರುಚ್ಚರಿಸುತ್ತದೆ.
ಅಗ್ನಿ-4 ಕ್ಷಿಪಣಿಯು ಅಗ್ನಿ ಸರಣಿಯ 4ನೇ ಮಿಸೈಲ್ ಆಗಿದೆ. ಈ ಹಿಂದೆ ಅಗ್ನಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣಿ ಯಶಸ್ವಿಯಾಗಿತ್ತು. ಅಗ್ನಿ-2 ಕ್ಷಿಪಣಿಯು 1000 ದಿಂದ 2000 ಕಿ.ಮೀ. ಗುರಿ ವ್ಯಾಪ್ತಿ ಹೊಂದಿತ್ತು. ಇದೀಗ ಅಗ್ನಿ -4 ಕ್ಷಿಪಣಿ ಕೂಡ ಯಶಸ್ವಿಯಾಗಿದೆ, ಇದು ಅಗ್ನಿ ಸರಣಿಯ ಕ್ಷಿಪಣಿಗಳಲ್ಲಿ ಸುಧಾರಿತ ಸರಣಿಯಾಗಿದೆ. ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಅಭಿವೃದ್ಧಿಪಡಿಸಿದೆ. ಈ ಮೂಲಕ ಭಾರತ ಸೇನೆ ಬತ್ತಳಿಕೆಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾದಂತಾಗಿದೆ.
ಕ್ಷಿಪಣಿ ಪರೀಕ್ಷೆಯು ಎಲ್ಲಾ ಕಾರ್ಯಾಚರಣೆಗಳು ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದೆ.
- ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
- ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
- ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ
- ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
- ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ
- ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ