ವೇದಾ ಶೂಟಿಂಗ್ ವೇಳೆ ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.
ಈ ಕುರಿತಂತೆ ವೇದಾ ಸಿನಿಮಾ ನಿರ್ದೇಶಕ ಹರ್ಷಾ ಮಾತನಾಡಿ, ‘ನಾನು ಈಗ ತಾನೆ ಶಿವಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಅವರು ಆಗಾಗ್ಗೆ ಜನರಲ್ ಚೆಕಪ್ ಮಾಡಿಸುತ್ತಾರೆ. ಈ ಬಾರಿಯೂ ಆಸ್ಪತ್ರೆಗೆ ಹೋಗಿದ್ದು ಜನರಲ್ ಚೆಕಪ್ ಮಾಡಿಸಿಕೊಳ್ಳಲು ಅಷ್ಟೆ. ಉಳಿದಂತೆ ಏನೂ ಇಲ್ಲ’ ಎಂದಿದ್ದಾರೆ.
ಬಿಪಿ ಮತ್ತು ಇಸಿಜಿ ಈಗ ನಾರ್ಮಲ್ ಆಗಿದೆ. ಬೈರಾಗಿ ಚಿತ್ರದ ಡಬ್ಬಿಂಗ್ ಅನ್ನು ಎರಡು ನಿಂತುಕೊಂಡೇ ಮಾಡಿದ್ದು ಹಾಗೂ ಮೈಸೂರು ಬೆಂಗಳೂರು ನಡುವೆ ಓಡಾಟ ಹೆಚ್ಚಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಮನುಷ್ಯ ಎಂದಾಗ ಇಂತಹ ವ್ಯತ್ಯಾಸಗಳು ಆಗುತ್ತವೆ. ಈಗ ನಾನು ಫೈನ್ ಆಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್