crime

ನಟ ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಮಾಡಿದ್ದು ಕಾರ್ ಚಾಲಕ, ಮನೆ ಕೆಲಸದಾಕೆ – ಚಿನ್ನಾಭರಣ ಪತ್ತೆ

ನಟ ರಜಿನಿಕಾಂತ್ ಮಗಳು ಐಶ್ವರ್ಯಾ ನಿವಾಸದ ಲಾಕರ್​​ನಲ್ಲಿ ಕಾಣೆಯಾಗಿದ್ದ ಚಿನ್ನ ಮತ್ತು ಡೈಮಂಡ್​ಗಳನ್ನು ಮನೆಯ ಕೆಲಸದವಳೇ ಕದ್ದಿರುವುದನ್ನು ತೇನಾಂಪೇಟೆ ಪೊಲೀಸ್​​ ಪತ್ತೆ ಹಚ್ಚಿದದಾರೆ.

ಕಾರು ಚಾಲಕ ಮತ್ತು ಮನೆ ಕೆಲಸ ಮಾಡುತ್ತಿದ್ದಾಕೆ ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕಾರಿನ ಡ್ರೈವರ್​ ವೆಂಕಟೇಶ್​ ಮತ್ತು ಈಶ್ವರಿ ಅವರು ಐಶ್ವರ್ಯಾ ಅವರ 100 ಪವನ್​ ಚಿನ್ನಾಭರಣವನ್ನು ಮತ್ತು 30 ಗ್ರಾಂ ವಜ್ರಾಭರಣವನ್ನು ಇದರೊಂದಿಗೆ ನಾಲ್ಕು ಕಿಲೋಗ್ರಾಂ ಬೆಳ್ಳಿ ವಸ್ತುವನ್ನು ಕದ್ದಿದ್ದಾರೆ.

ಕದ್ದ ಆಭರಣದಿಂದ ಈಶ್ವರಿ ಮನೆ ಖರೀದಿ ಮಾಡಿದ್ದಾರೆ ಇತರ ವಸ್ತುಗಳನ್ನು ಅವರು ಖರೀದಿಸಿದ್ದಾರೆ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.

ಮನೆಕೆಲಸದಾಕೆ ಈಶ್ವರಿ ಅವರು ಐಶ್ವರ್ಯಾ ಅವರ ಮನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಐಶ್ವರ್ಯಾ ಲಾಕರ್​ ಕೀ ಇರುವ ಸ್ಥಳದ ಬಗ್ಗೆ ಈಶ್ವರಿಗೆ ತಿಳಿದಿತ್ತು. ಹಾಗಾಗಿ ಲಾಕರ್ ತೆರೆಯುತ್ತಿದ್ದಳು. ಹಲವು ಬಾರಿ ಲಾಕರ್​ ತೆರೆದು ಆಭರಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಪೊಲೀಸರು ಈಶ್ವರಿಯ ಆಸ್ತಿ, ಮನೆ ಆಸ್ತಿಯ ಬಗ್ಗೆ ದಾಖಲೆಯನ್ನು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –‘ವಿದ್ಯಾನಿಧಿ ಯೋಜನೆ’: ಆಟೋ, ಕ್ಯಾಬ್ ಚಾಲಕರ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ

Team Newsnap
Leave a Comment

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024