ನಟ ರಜಿನಿಕಾಂತ್ ಮಗಳು ಐಶ್ವರ್ಯಾ ನಿವಾಸದ ಲಾಕರ್ನಲ್ಲಿ ಕಾಣೆಯಾಗಿದ್ದ ಚಿನ್ನ ಮತ್ತು ಡೈಮಂಡ್ಗಳನ್ನು ಮನೆಯ ಕೆಲಸದವಳೇ ಕದ್ದಿರುವುದನ್ನು ತೇನಾಂಪೇಟೆ ಪೊಲೀಸ್ ಪತ್ತೆ ಹಚ್ಚಿದದಾರೆ.
ಕಾರು ಚಾಲಕ ಮತ್ತು ಮನೆ ಕೆಲಸ ಮಾಡುತ್ತಿದ್ದಾಕೆ ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕಾರಿನ ಡ್ರೈವರ್ ವೆಂಕಟೇಶ್ ಮತ್ತು ಈಶ್ವರಿ ಅವರು ಐಶ್ವರ್ಯಾ ಅವರ 100 ಪವನ್ ಚಿನ್ನಾಭರಣವನ್ನು ಮತ್ತು 30 ಗ್ರಾಂ ವಜ್ರಾಭರಣವನ್ನು ಇದರೊಂದಿಗೆ ನಾಲ್ಕು ಕಿಲೋಗ್ರಾಂ ಬೆಳ್ಳಿ ವಸ್ತುವನ್ನು ಕದ್ದಿದ್ದಾರೆ.
ಕದ್ದ ಆಭರಣದಿಂದ ಈಶ್ವರಿ ಮನೆ ಖರೀದಿ ಮಾಡಿದ್ದಾರೆ ಇತರ ವಸ್ತುಗಳನ್ನು ಅವರು ಖರೀದಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮನೆಕೆಲಸದಾಕೆ ಈಶ್ವರಿ ಅವರು ಐಶ್ವರ್ಯಾ ಅವರ ಮನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಐಶ್ವರ್ಯಾ ಲಾಕರ್ ಕೀ ಇರುವ ಸ್ಥಳದ ಬಗ್ಗೆ ಈಶ್ವರಿಗೆ ತಿಳಿದಿತ್ತು. ಹಾಗಾಗಿ ಲಾಕರ್ ತೆರೆಯುತ್ತಿದ್ದಳು. ಹಲವು ಬಾರಿ ಲಾಕರ್ ತೆರೆದು ಆಭರಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪೊಲೀಸರು ಈಶ್ವರಿಯ ಆಸ್ತಿ, ಮನೆ ಆಸ್ತಿಯ ಬಗ್ಗೆ ದಾಖಲೆಯನ್ನು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –‘ವಿದ್ಯಾನಿಧಿ ಯೋಜನೆ’: ಆಟೋ, ಕ್ಯಾಬ್ ಚಾಲಕರ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ