ಭೀಕರ ರಸ್ತೆ ಅಪಘಾತ; ಯಕ್ಷಗಾನ ಹಿರಿಯ ಕಲಾವಿದ ಸ್ಥಳದಲ್ಲೇ ಸಾವು

Team Newsnap
0 Min Read

ಉಡುಪಿಯ ಮೂಡಬಿದಿರೆಯ ಗಂಟಾಲಕಟ್ಟೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯಕ್ಷಗಾನ ಹಿರಿಯ ಕಲಾವಿದರೊಬ್ಬರು ಸಾವನ್ನಪ್ಪಿದ್ದಾರೆ.

ವಾಮನ ದೇವಾಡಿಗ(46) ಮೃತ ಯಕ್ಷಗಾನ ಕಲಾವಿದ. ಕುಂದಾಪುರದ ಕೊಂಕಿ‌ ಎಂಬಲ್ಲಿ ಯಕ್ಷಗಾನ ಮುಗಿಸಿ ಬರುವಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಬೈಕ್​​ನಲ್ಲಿದ್ದ ವಾಮನ ದೇವಾಡಿಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಿರಿಯಡ್ಕ ಮೇಳದ ಕಲಾವಿದರಾಗಿದ್ದ ವಾಮನ ದೇವಾಡಿಗ, ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುವುದರಲ್ಲಿ ಖ್ಯಾತಿ ಪಡೆದುಕೊಂಡಿದ್ದರು.

Share This Article
Leave a comment