ಮಂಡ್ಯದ ಗೆಜ್ಜಲಗೆರೆ ಕೈಗಾರಿಕ ಪ್ರದೇಶದಲ್ಲಿ ಭೀಕರ ಅಗ್ನಿಅವಘಡ : ತೆಂಗಿನ ನಾರಿನ ಉತ್ಪನ್ನಗಳ ಕಾರ್ಖಾನೆಗೆ ಬೆಂಕಿ

Team Newsnap
1 Min Read

ಮದ್ದೂರಿನ ಬಳಿ ತೆಂಗಿನ ನಾರಿನ ಉತ್ಪನ್ನಗಳ ಕಾರ್ಖಾನೆಗೆ ಬೆಂಕಿ ಧಗಧಗ ಉರಿದಿದೆ. ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಮೂಗಾಂಬಿಗೈ ಫೈಬರ್ ಮಿಲ್ ನಲ್ಲಿ ಶನಿವಾರ ಈ ದುರ್ಘಟನೆ ಸಂಭವಿಸಿದ್ದು, ಅಂದಾಜು 90 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.

ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಚೆಗರೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕೆಲ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆ. ಆದರೆ, ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಾರ್ಖಾನೆಯ ಯಂತ್ರೋಪಕರಣಗಳು, ಚೆಗರೆ ಸಂಪೂರ್ಣ ಭಸ್ಮವಾಗಿದ್ದು, ಕಾರ್ಖಾನೆಯ ಸಿಬ್ಬಂದಿಗಳು ಇಂದು ರಜೆ ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಯಾವುದೇ ಅನಾಹುತ ಸಂಭವಿಸಿಲ್ಲ. ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರ ಸಾಹಸ ಮಾಡಿದರು.

Share This Article
Leave a comment