ಮುಖ್ಯಮಂತ್ರಿ ವಿರುದ್ದ ಕಪ್ಪು ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿನಿ ಈಗ ರಾಜಕೀಯ ಪ್ರವೇಶ

Team Newsnap
1 Min Read

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ವಿರುದ್ದ ಕಪ್ಪು ಬಾವುಟ ಪ್ರದಶ೯ನ ಮಾಡಿದ್ದ ವಿದ್ಯಾಥಿ೯ನಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಧಿ೯ಸಲು ಸಮಾಜವಾದಿ ಪಕ್ಷ. ಟಿಕೆಟ್ ನೀಡಿದೆ.

ಯೋಗಿ ವಿರುದ್ಧ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಟಿಕೆಟ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಕಪ್ಪುಬಾವುಟ ಪ್ರದರ್ಶಿಸಿ ಬಂಧನಕ್ಕೊಳಗಾಗಿದ್ದ 25 ವರ್ಷದ ಪೂಜಾ ಶುಕ್ಲಾಗೆ ರಾಜಕೀಯದ ಬಾಗಿಲು ತೆರೆದಿದೆ.

ಸಮಾಜವಾದಿ ಪಕ್ಷ ಟಿಕೆಟ್ ನೀಡಿ, ಲಖನೌ ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪೂಜಾ ವಿಧಾನಸಭಾ ಚುನಾವಣೆಯ ಅತಿ ಕಿರಿಯ ಅಭ್ಯರ್ಥಿ ಎನಿಸಿದ್ದಾರೆ.

ಸರ್ಕಾರದ ನೀತಿಗಳನ್ನು ಖಂಡಿಸಿ 2017ರ ಜೂನ್‌ನಲ್ಲಿ ಪೂಜಾ ಶುಕ್ಲಾ ಇತರ 10 ಮಂದಿಯೊಂದಿಗೆ ಲಖನೌ ವಿವಿ ರಸ್ತೆಯಲ್ಲಿ ಯೋಗಿ ಬೆಂಗಾವಲು ವಾಹನಗಳನ್ನು ತಡೆಯಲು ಯತ್ನಿಸಿ, ಕಪ್ಪು ಬಾವುಟ ಪ್ರದರ್ಶಿಸಿದ್ದರು. ಬಳಿಕ ಪೂಜಾ ಶುಕ್ಲಾರನ್ನು ಜೈಲಿಗೆ ಕಳುಹಿಸಲಾಗಿತ್ತು

Share This Article
Leave a comment