ಕಾವೇರಿ ನದಿಗೆ ಹಾರಿದ ವಿದ್ಯಾರ್ಥಿ- ಕೊಚ್ಚಿ ಹೋದವನ ಪತ್ತೆಗೆ ಹುಡುಕಾಟ

Team Newsnap
1 Min Read

ಮೈಸೂರಿನ ವಿದ್ಯಾರ್ಥಿಯೊಬ್ಬ ಮಂಡ್ಯದ ಕೆ ಆರ್ ಎಸ್ ಬಳಿ ಕಾವೇರಿ ನದಿಗೆ ಹಾರಿದ ಪರಿಣಾಮ ಆತ ರಭಸವಾದ ನೀರಿನೊಂದಿಗೆ ಕೊಚ್ಚಿಕೊಂಡು ಹೋದ ಘಟನೆ ಜರುಗಿದೆ.

ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್ ಜಲಾಶಯ ನೋಡಲು ಬಂದಿದ್ದಾಗ ಇಂಥದ್ದೊಂದು ದುರಂತ ಜರುಗಿದೆ.ಇದನ್ನು ಓದಿ –ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಾವಲು ವಾಹನ ಪಲ್ಟಿ: ಇಬ್ಬರಿಗೆ ಗಾಯ

ಮೈಸೂರಿನ ಪಡುವಾರಹಳ್ಳಿಯ ಸೃಜನ್ (20) ನದಿಗೆ ಹಾರಿದ ವಿದ್ಯಾರ್ಥಿ. ಆತ ಯಾಕೆ ಹಾರಿದ ಎಂಬುದು ಇನ್ನೂ ನಿಗೂಢವಾಗಿದೆ.

ಸೃಜನ್ ಮಂಗಳವಾರ ಸ್ನೇಹಿತರೊಂದಿಗೆ ಕೆಆರ್​ಎಸ್​ ಜಲಾಶಯ ಮತ್ತು ಕಾವೇರಿ ನದಿಯನ್ನು ನೋಡಲು ಬಂದಿದ್ದ.

ಕೆಆರ್​ಎಸ್​ ಗೇಟ್​ನಿಂದ ಸುಮಾರು 150 ಮೀಟರ್ ದೂರದಲ್ಲಿ ನಿಂತು ನೋಡುತ್ತಿದ್ದ ಈತ ಏಕಾಏಕಿ ಕಾವೇರಿ ನದಿಗೆ ಧುಮುಕಿದ್ದಾನೆ. ಭೋರ್ಗರೆಯುತ್ತಿರುವ ನದಿಯ ಹರಿವಿನ ರಭಸಕ್ಕೆ ಈತ ಕೊಚ್ಚಿಕೊಂಡು ಹೋಗಿದ್ದಾನೆ.

ಸ್ನೇಹಿತರು ಈ ಕುರಿತು ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನೂ ಆತನ ಪತ್ತೆಯಾಗಿಲ್ಲ. ನಾಳೆ ಸೃಜನ್​ಗಾಗಿ ಶೋಧ ಕಾರ್ಯ ನಡೆಯಲಿದೆ.

ಕೆಆರ್​ಎಸ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a comment