ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ!

Team Newsnap
1 Min Read
A Muslim woman threw the 2 lakh compensation money given to her by Siddu! ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ! #thenewsnap #Latestnews #Siddu #Congress #Women #Money #COmpensation #India #Bengaluru #Mandya #Mysuru

ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಪಡೆಯಲು ನಿರಾಕರಿಸಿ ಮುಸ್ಲಿಂ ಮಹಿಳೆಯೊಬ್ಬರು ದುಡ್ಡನ್ನು ಎಸೆದ ಘಟನೆ ನಡೆದಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆಯಿಂದ ಎರಡು ದಿನಗಳ ಕಾಲ ಬಾಗಲಕೋಟೆ ಪ್ರವಾಸದಲ್ಲಿದ್ದಾರೆ.ಇದನ್ನು ಓದಿ -ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಿ ನಟ ಪ್ರತಾಪ್

ಇಂದು ಕೆರೂರು ಘರ್ಷಣೆಯಲ್ಲಿ ಗಾಯಾಳುಗಳಿಗೆ ಸಾಂತ್ವನ ಹೇಳಲು ಸಿದ್ದರಾಮಯ್ಯ ಹೋಗಿದ್ದರು. ಈ ವೇಳೆ ಸಿದ್ದರಾಮಯ್ಯ ಮಹಿಳೆಯೊಬ್ಬರಿಗೆ ಪರಿಹಾರವಾಗಿ 2 ಲಕ್ಷ ರೂಪಾಯಿ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡ ಮಹಿಳೆ ಆ ದುಡ್ಡನ್ನು ಸಿದ್ದರಾಮಯ್ಯರ ಕಾರಿನೊಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

‘ನಮ್ಗೆ ದುಡ್ಡು ಬೇಡ.. ಶಾಂತಿ ಬೇಕು’ ಎಂದು ಸಿದ್ದರಾಮಯ್ಯರತ್ತ ದುಡ್ಡನ್ನು ಎಸೆದಿದ್ದಾಳೆ. ಮಹಿಳೆ ದುಡ್ಡನ್ನು ಎಸೆಯುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ಸಿದ್ದರಾಮಯ್ಯಘರ್ಷಣೆಯಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನಿಫ್, ದಾವಲ್ ಮಲಿಕ್, ರಾಜೆಸಾಬ್, ರಫೀಕ್ ಆರೋಗ್ಯ ವಿಚಾರಿಸಿದರು.
ನಂತರ ರಜ್ಮಾ ಎಂಬ ಮಹಿಳೆಗೆ ಸಿದ್ದರಾಮಯ್ಯ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಆದರೆ ಹಣವನ್ನು ಮಹಿಳೆ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ.

ನಂತರ ಸಿದ್ದರಾಮಯ್ಯರ ಕಾರನ್ನು ಹಿಂಬಾಲಿಸಿ ಆ ಹಣವನ್ನು ಕಾರಿನೊಳಗೆ ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ.

Share This Article
Leave a comment