ಪೋಲಿಸ್ ಅಧಿಕಾರಿಗಳ ನಿಂದನೆಗೆ ನೊಂದು ಠಾಣೆಯಲ್ಲೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ

Team Newsnap
1 Min Read

ಎಸ್ ಐ , ಡಿವೈಎಸ್ ಪಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಠಾಣೆಯ ಮುಂದೆ ವಿಷ ಸೇವಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಪೊಲೀಸ್ ಠಾಣೆ ಮುಂದೆ
ಜರುಗಿದೆ,

ಎನ್​.ಗೌರಿಪುರ ಗ್ರಾಮದ ಗಿರೀಶ್​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತನನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಷುಲ್ಲಕ ಕಾರಣಗಳಿಗೆ ಎರಡು ಸಮುದಾಯದ ಗುಂಪುಗಳ ನಡುವೆ ಗಲಾಟೆ ನಡೆದ ಕಾರಣ ಠಾಣೆಯಲ್ಲಿ ರಾಜಿ ಪಂಚಾಯ್ತಿ ಸಭೆ ಇತ್ತು.

ಈ ಸಂಧಾನ ಸಭೆಯಲ್ಲಿ ಎಸ್​.ಐ.ಮಹೇಶ್​ ಹಾಗೂ ಡಿವೈಎಸ್ಪಿ ಶ್ರೀಧರ್​ ರಾಜಿ ಪಂಚಾಯ್ತಿ ಕಾರ್ಯ ನಡೆಯುವ ವೇಳೆಯಲ್ಲಿ ವಿನಾಕಾರಣ ಬೈದು ಮಾನಹಾನಿ ಮಾಡಿದ್ದಾರೆಂದು ಆರೋಪಿಸಿರುವ ಗಿರೀಶ್​ ಗಲಾಟೆ ಬಿಡಿಸಿದ್ದಕ್ಕೆ ಪೊಲೀಸರು ಹೆದರಿಸಿರುವುದಾಗಿ ಆರೋಪಿಸಿದ್ದಾರೆ.

ಎಸ್​ಐ, ಡಿವೈಎಸ್ಪಿಯಿಂದ ಬೈಗುಳ ಹಾಗೂ ಬೆದರಿಕೆಗೆ ಆ ವ್ಯಕ್ತಿ ನೊಂದು ಹೋಗಿದ್ದಾರೆ,ಅಷ್ಟೇ ಅಲ್ಲದೇ ಹೋಟೆಲ್​ನಲ್ಲಿ ಜನರಿಗೆ ತಾರತಮ್ಯ ಮಾಡುವುದಾಗಿಯೂ ತಿಳಿಸಿರುವ ಇವರು, ಪೊಲೀಸ್​ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment