ಅಪ್ಪು ಸಮಾಧಿ ನೋಡಲು ಹಠ ರಾಮನಗರದ ಪುನೀತ್ ಅಭಿಮಾನಿ ಆತ್ಮಹತ್ಯೆ

Team Newsnap
0 Min Read

ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿಮಾನಿ ರಾಮನಗರ ಜಿಲ್ಲೆಯಲ್ಲಿ ನೇಣು ಬಿಗಿದುಕೊಂಡು
ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚನ್ನಪಟ್ಟಣದ ಎಲೆಕೇರಿಯ ವೆಂಕಟೇಶ್ (26) ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ.

ಪವರ್​ಸ್ಟಾರ್ ಅಭಿಮಾನಿಯಾಗಿದ್ದ ವೆಂಕಟೇಶ್ ಪುನೀತ್​ ಅಕಾಲಿಕ ನಿಧನದಿಂದ ನೊಂದಿದ್ದು ಕಳೆದ ಮೂರು ದಿನಗಳಿಂದ ಊಟ ಬಿಟ್ಟಿದ್ದನಂತೆ.

ಈ ಅಭಿಮಾನಿ ಅಪ್ಪು ಸಮಾಧಿ ನೋಡಲು ಹಠ ಹಿಡಿದಿದ್ದನಂತೆ. ಅಪ್ಪು ಸಮಾಧಿ ನೋಡಲೇಬೇಕೆಂಬ ಆಶಯ ಹೊಂದಿದ್ದನಂತೆ. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಚನ್ನಪಟ್ಟಣ ಪೂರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment