ಕುತೂಹಲ ಮೂಡಿಸಿರುವ ವಿಜಯೇಂದ್ರ ದೆಹಲಿ ಪ್ರವಾಸ : ಅನೇಕ ಸಚಿವರ ದಂಡು ದೆಹಲಿಗೆ

Team Newsnap
1 Min Read

ಸಂಪುಟ ಸರ್ಜರಿ ಹೊತ್ತಲ್ಲೇ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ಹೋಗಿದ್ದಾರೆ

ಹೈಕಮಾಂಡ್​ ನಾಯಕರಿಂದ ಬುಲಾವ್​ ಬಂದ ಬೆನ್ನಲ್ಲೆ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ.

ನಿನ್ನೆ ಹೈಕಮಾಂಡ್​ ನಾಯಕರು ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚಿಸಿದ್ದರು.

ಅದರಂತೆ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಸಂಪುಟ ಪುನಾರಚನೆ ಕಸರತ್ತಿನ ನಡುವೆ ವಿಜಯೇಂದ್ರ ದೆಹಲಿಯಾತ್ರೆ ಮಾಡಿರುವದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಯಾತ್ರೆ ಮುನ್ನವೇ ಸಚಿವರ ದಂಡು ದೆಹಲಿಗೆ ತೆರಳಿದೆ. ರಾಜ್ಯ ಸಚಿವ ಸಂಪುಟದ 10ಕ್ಕೂ ಹೆಚ್ಚು ಸಚಿವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಇಂಧನ ಸಚಿವ ಸುನಿಲ್ ​ಕುಮಾರ್​, ಜವಳಿ ಸಚಿವ ಶಂಕರ್ ಪಾಟೀಲ್​ ಮುನೇನಕೊಪ್ಪ, ಕಾನೂನು & ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಪಶುಸಂಗೋಪನಾ ಸಚಿವ ಪ್ರಭು ಚೌಹ್ಹಾಣ್, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ದೆಹಲಿಗೆ ಹೋಗಿದ್ದಾರೆ.

Share This Article
Leave a comment