ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತನ ಮಗಳು ಸೋನಾಲ್ (26) ರಾಜಸ್ಥಾನದಲ್ಲಿ ನ್ಯಾಯಾಧೀಶೆ ಹುದ್ದೆಗೆ ಆಯ್ಕೆ ಯಾಗಿದ್ದಾಳೆ.
2018ರಲ್ಲಿ ಆರ್ಜೆಎಎಸ್ ಪರೀಕ್ಷೆ ಪಾಸ್ ಮಾಡಿದ್ದ ಸೋನಾಲ್ ತರಬೇತಿ ಪೂರ್ಣಗೊಳಿಸಿದ್ದಾರೆ. ಕೆಲವೇ ದಿನಗಳಲ್ಲಿ ನ್ಯಾಯಾಧೀಶೆಯಾಗಿ ನೇಮಕ ಆಗಲಿದ್ದಾರೆ.
ಸೋನಾಲ್ ಎಲ್ಎಲ್ಬಿ ಹಾಗೂ ಎಲ್ಎಲ್ಎಂ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇದಾದ ಬಳಿಕ ಒಂದು ವರ್ಷಗಳ ತರಬೇತಿ ಪೂರ್ಣಗೊಳಿಸಿದ ಸೋನಾಲ್ ರಾಜಸ್ಥಾನದ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಗೊಳ್ಳಲಿದ್ದಾರೆ.
ತಂದೆ ಲಾಲ್ ಶರ್ಮಾರ ಹೈನೋದ್ಯಮಕ್ಕೂ ಸಹಾಯ ಮಾಡೋ ಸೋನಾಲ್, ಪದವೀಧರೆಯಾಗಿದ್ದರೂ ಸಹ ಬೆಳಗ್ಗೆ 4 ಗಂಟೆಗೇ ಎದ್ದು ಹಸುವಿನ ಹಾಲು ಕರೆಯೋದು, ಕೊಟ್ಟಿಗೆ ಸ್ವಚ್ಛಗೊಳಿಸೋದು, ಸಗಣಿ ಸಂಗ್ರಹಿಸೋದು ಜೊತೆಗೆ ಮನೆ ಮನೆಗೆ ತೆರಳಿ ಹಾಲನ್ನೂ ನೀಡುತ್ತಾರೆ.
ಕಳೆದ ವರ್ಷ ಡಿಸೆಂಬರ್ನಲ್ಲೇ ಫಲಿತಾಂಶ ಘೋಷಣೆಯಾಗಿತ್ತು. ಆದರೆ ಸೋನಾಲ್ ಕಟ್ ಆಫ್ ಅಂಕಕ್ಕಿಂತ 1 ಅಂಕ ಕಡಿಮೆ ಪಡೆದ ಕಾರಣ ಅವಕಾಶ ಲಭ್ಯ ವಾಗಿರಲಿಲ್ಲ.
ಈಗ ಆಯ್ಕೆಯಾದ ಕೆಲ ವಿದ್ಯಾರ್ಥಿಗಳು ಸೇವೆಗೆ ನೇಮಕವಾಗದ ಕಾರಣ ಸೋನಾಲ್ ಅದೃಷ್ಟ ಒಲಿದು ಬಂದಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ