ಮಂಡ್ಯದಲ್ಲೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನೆಪ ಇಟ್ಟು ಕೊಂಡು ಅಕ್ರಮಗಳು ಎಗ್ಗಿಲ್ಲದೇ ನಡೆದಿವೆ.
ಬಹಿರಂಗ ಹರಾಜು ಮೂಲಕ ಗ್ರಾಮ ಪಂಚಾಯತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿ ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ.
ಸಂತೆಯಲ್ಲಿ ಮೇಕೆ ಹರಾಜಿನ ರೀತಿ ಗ್ರಾ.ಪಂ ಸ್ಥಾನಗಳು ಹರಾಜು ಹಾಕುವ ಸ್ಥಿತಿಗೆ ಗ್ರಾಮದ ಮುಖಂಡರೇ ಬಂದು ನಿಂತಿದ್ದಾರೆ.
ಎಲ್ಲಿ ಸದಸ್ಯರು ಹರಾಜು ಆಗಿದ್ದಾರೆ?
ಮಂಡ್ಯ ಜಿಲ್ಲೆಯ ನಾಗಮಂಗಲ ಲಾಳನಕೆರೆ ಗ್ರಾಪಂ ವ್ಯಾಪ್ತಿಯಲ್ಲಿನ ಬಿದರಕೆರೆ ಗ್ರಾಮದ 3 ಸದಸ್ಯರ ಚುನಾವಣೆ ನಡೆಸದೆ, ಅವಿರೋಧ ಆಯ್ಕೆ ನೆಪದಲ್ಲಿ ಹರಾಜು ಪ್ರಕ್ರಿಯೆ ಮಾಡಿದ್ದಾರೆ.
ಅವಿರೋಧ ಆಯ್ಕೆ ನೆಪದಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಗ್ರಾ.ಪಂ ಸ್ಥಾನ ಹರಾಜು ಹಣವನ್ನು ಸಂಗ್ರಹಿಸಲಾಗಿದೆ.
ಗ್ರಾ.ಪಂ ಸ್ಥಾನಗಳನ್ನು ಬಿಡ್ ಕೂಗಿದ ಗ್ರಾಮಸ್ಥರು ಒಂದು ಸ್ಥಾನಕ್ಕೆ 6 ರಿಂದ 7 ಲಕ್ಷ ರುಗಳ ವರೆಗೂ ನಡೆದಿರುವ ಬಿಡ್ ಮಾಡಿದ್ದಾರೆ.
ಗ್ರಾ.ಪಂ ಸ್ಥಾನಗಳನ್ನು ಹರಾಜು ಹಾಕುವ ಪ್ರಕ್ರಿಯೆಯ ವಿಡಿಯೋ ಈಗ ತಾಲೂಕಿನಾದ್ಯಂತ ಫುಲ್ ವೈರಲ್ ಅಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ