ಕಲಾವತಿ ಪ್ರಕಾಶ್
ಬೆಂಗಳೂರು
ಬೆಟ್ಟದ ಮೇಲೆ ಕೋಟೆ ಕಟ್ಟಿ
ಆಳ್ವಿಕೆ ನಡೆಸಿದ ಚಾಲುಕ್ಯರು
ಕೋಟೆಯನ್ನು ಬಲಪಡಿಸಿದಂಥ
ಹೆಮ್ಮೆಯ ರಾಜರು ಯಾದವರು
ಬೆಟ್ಟ ಎಂದರೆ ಗಿರಿಯೆಂದರ್ಥ
ಆಳ್ವಿಕೆ ಮಾಡಿದರು ಯಾದವರು
ಗಿರಿಯ ಮೇಲಿನರಮನೆ ಆಳಿದ
ಯಾದವರಿಂದ ಯಾದಗಿರಿ ಈ ಊರು
ಬೆಟ್ಟದ ಮೇಲೆ ಸಿಡಿಲು ಬಡಿಯಲು
ಬಂಡೆಯೊಡೆದು ಆಯಿತು ಬಾವಿ
ಬರಗಾಲದಲ್ಲೂ ಬತ್ತದ ಒಣಗದ
ತಣ್ಣನೆ ಕೊರೆಯುವ ನೀರಿನ ಬಾವಿ
ಯಾದಗಿರಿಯನು ಕಲ್ಯಾಣ
ಕರುನಾಡ ಹೃದಯವೆಂದೆನ್ನುವರು
ಇದೇ ಜಿಲ್ಲೆಯ ಸುರಪುರವಾಳಿದ
ವೆಂಕಟಪ್ಪನೆಂಬ ರಾಜರು
ಹೆಮ್ಮೆಯ ನಾಡೊಳು ಕಳಚೂರಿ ಚಾಲುಕ್ಯ
ಪರ್ಶಿಯನ್ನರ ಶಾಸನ ಉಂಟು
ಕೃಷ್ಣಾ ನದಿಯ ಬಸವಸಾಗರ
ಜಲಾಶಯವೂ ಇಲ್ಲುಂಟು
ಕನ್ನಡ ನಾಡಿನ ಎರಡನೆ ದೊಡ್ಡ
ಪಕ್ಷಿ ಧಾಮವು ಬೋನಾಳ
ಸುಂದರ ಶಿಲ್ಪ ಕಲೆಯ ನಾಡಲಿ
ನೋಡಲು ಬನ್ನಿ ಕೋಟೆಗಳ
ದೈವ ಭಕ್ತಿಯಲಿ ವಿಶಿಷ್ಟವಾದ
ಊರೊಂದಿಹುದು ಮೈಲಾಪುರ
ಇಲ್ಲಿನ ಊರಿನ ಅಧಿದೇವತೆಯೆ
ಗುಹೆಯ ಮೈಲಾರ ಲಿಂಗೇಶ್ವರ
ಕೋಳಿ ಸಾಕರು ಮಂಚ ಬಳಸರು
ಕುದುರೆ ಏರರು ಮಡಕೆ ಮಾಡರು
ಗದ್ದುಗೆ ಮೇಲೆ ಮಲ್ಲಯ್ಯ ಕುಳಿತರೆ
ಮಂಚ ಬಳಸಲಾರರು ಈ ಭಕ್ತರೆ
ಶೂರ ವೀರರನು ಶರಣ ಭಕ್ತರನು
ಪಡೆದ ಜಿಲ್ಲೆಯು ಯಾದಗಿರಿ
ಕನ್ನಡ ನಾಡಿನ ಹೆಮ್ಮೆ ಇತಿಹಾಸಕೆ
ಹೆಸರುವಾಸಿ ಈ ಯಾದವಗಿರಿ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ