ಶರಣು ಸದ್ಗುರು ನಿನಗೆ
ಶರಣು ಶರಣಾರ್ಥಿ..!
ಹೊತ್ತಿಸೆನ್ನೆದೆಯೊಳಗೆ
ಪ್ರಜ್ಞೆಯ ಪ್ರಣತಿ..
ಸುತ್ತ ಮುತ್ತಿಹುದೆನಗೆ
ಕಾರಿರುಳು ಕಾಡು..!
ಹುಡುಕಬೇಕಿದೆ ನನಗೆ
ನಾನೆ ಹೊಸ ಜಾಡು..!
ನನ್ನ ಪಯಣಕೆ ನನದೆ
ಬೆಳಕಿರಲಿ ಸತತ..!
ಬೆಳಕೂರ ಗುರಿ ಬಿಡದೆ
ಸಾಗಲನವರತ..!
ಹಾವು ಏಣಿಯ ಆಟ
ಈ ಬದುಕ ತಿಳಿಸು..!
ಹಾವಿಗೆಟುಕದೆ ಏಣಿ
ಏರುವುದ ಕಲಿಸು..!
ಹೊಳೆಸೆನಗೆ ಈ ಪಾಡ
ಹಾಡುಗೊಳಿಸುವುದ..!
ಜಗಕೆ ಮಾಡದೆ ಕೇಡ
ನಗುತ ನಡೆಯುವುದ..!
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ