February 23, 2026

Newsnap Kannada

The World at your finger tips!

lake 1

ವರ ಮಹಾಲಕ್ಷೀ ಹಬ್ಬಕ್ಕೆ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ಅಪ್ಪ ಮಗ ದಾರುಣ ಸಾವು

Spread the love

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂಚನಹಳ್ಳಿ ಸಮೀಪದ ಕೆರೆಯಲ್ಲಿ ತಾವರೆ ಹೂ ತರುವುದಕ್ಕೆ ಕೆರೆಗೆ ಇಳಿದಿದ್ದ ತಂದೆ, ಮಗ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ವರ ಮಹಾಲಕ್ಷೀ ಹಬ್ಬದ ಪ್ರಯುಕ್ತ ತಾವರೆ ಹೂ ತಂದು ಮಾರಾಟ ಮಾಡುವುದಕ್ಕೆ , ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯಲ್ಲಿನ ಕೆರೆಗೆ ತಂದೆ ಪುಟ್ಟರಾಜು(42) ಹಾಗೂ ಮಗ ಕೇಶವ್(14) ಇಳಿದಿದ್ದರು.

ಈ ವೇಳೆಯಲ್ಲಿ ಕೆರೆಯ ನೀರಿನಲ್ಲಿ ಮಗ ಕೇಶವ್ ಮುಳುಗುತ್ತಿದ್ದದ್ದು ಗಮನಿಸಿದ ತಂದೆ ಪುಟ್ಟರಾಜು ರಕ್ಷಿಸಲು ಹೋಗಿ, ಇಬ್ಬರೂ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರು ದೊಡ್ಡಬಳ್ಳಾಪುರದ ಶಾಂತಿನಗರ ನಿವಾಸಿಗಳು, ಈ ಸಂಬಂಧ ದೊಡ್ಡಬೆಳಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!