ಬೆಂಗಳೂರು: ರಾಜ್ಯದಲ್ಲಿ 66 ಇನ್ಸ್ ಪೆಕ್ಟರ್ ಹಾಗೂ 21 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಗೃಹ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದೆ,
21 ಮಂದಿ ಡಿವೈಎಸ್ಪಿ ಹಾಗೂ 66 ಮಂದಿ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಡಿವೈಎಸ್ಪಿ ಎಲ್ ನವೀನ್ ಕುಮಾರ್ ಅವರನ್ನು ದೇವನಹಳ್ಳಿ ಉಪವಿಭಾಗಕ್ಕೆ, ಪ್ರಕಾಶ್ ರಾಥೋಡ್ ಅವರನ್ನು ಆಡುಗೋಡಿ ಸಂಚಾರ ಠಾಣೆಗೆ, ಬಿ.ಶಿವ ಶಂಕರ ರೆಡ್ಡಿ ಅವರನ್ನು ಮೈಕೋ ಲೇಔಟ್ ಉಪವಿಭಾಗಕ್ಕೆ ಸೇರಿದಂತೆ 21 ಡಿವೈಎಸ್ಪಿ ವರ್ಗಾವಣೆ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಗಳಾದ ಎ ಕೆ ಗಿರೀಶ್ ಅವರನ್ನು ಕಬ್ಬನ್ ಪಾರ್ಕ್ ಠಾಣೆ, ಜಿ.ಎಸ್ ರಾಘವೇಂದ್ರ-ದೇವನಹಳ್ಳಿ ವಿಮಾನ ನಿಲ್ದಾಣ ಸಂಚಾರ ಠಾಣೆ, ಎಂ.ಶ್ಯಾಮ್-ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ, ಎಂ.ಚಂದ್ರಶೇಖರ್-ಸಂಪಿಗೆಹಳ್ಳಿ, ಬಿಪಿ ಗಿರೀಶ್ – ಸದಾಶಿವನಗರ, ಎಂ.ಎನ್.ರವಿಶಂಕರ್ – ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಸಿ.ಬಿ ಶಿವಸ್ವಾಮಿ-ವಿದ್ಯಾರಣ್ಯಪುರ, ಹೆಚ್.ಉಮಾಶಂಕರ್-ಬಸವನಗುಡಿ ಸಂಚಾರ ಠಾಣೆ, ಟಿ.ಬಿ ಚಿದಾನಂದಮೂರ್ತಿ-ಟಿಟಿಬಿ, ಟಿ.ಎಂ ಧರ್ಮೇಂದ್ರ-ಹೈಕೋರ್ಟ್ ಭದ್ರತೆ, ಎಸ್ ಆರ್ ಗೋವಿಂದರಾಜ್ – ಸಿಟಿ ಎಸ್ ಬಿ ಸೇರಿದಂತೆ 66 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ.
66 ಇನ್ಸ್ ಪೆಕ್ಟರ್
21 ಡಿವೈಎಸ್ಪಿ
ಇದನ್ನು ಓದಿ -ಗಗನಯಾತ್ರಿಯಾಗುವುದು ಹೇಗೆ ( How to become Astronaut )
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ