ಮಡಿಕೇರಿ ಖಜಾನೆ ಪ್ರಥಮ ದರ್ಜೆ ಸಹಾಯಕ ಗುಮಾಸ್ತನೊಬ್ಬ5 ಸಾವಿರ ರು ಲಂಚ ಪಡೆಯವ ವೇಳೆ ಸೋಮವಾರ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಕೊಡಗು ಜಿಲ್ಲೆಯ ಕುಶಾಲನಗರ ಸರ್ವೇ ಅಧೀಕ್ಷಕರು ತಮ್ಮ ನಿವೃತ್ತಿ ವೇತನ ಪಡೆಯುವ ಸಂಬಂಧ ಮಡಿಕೇರಿಯ ಜಿಲ್ಲಾ ಖಜಾನೆ ಪ್ರಥಮ ದರ್ಜೆ ಸಹಾಯಕರೊಬ್ಬರು 5000 ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದಾರೆ.ಇದನ್ನು ಓದಿ –ನೀಟ್ ಪರೀಕ್ಷೆ: ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿ ಅವಮಾನ: ಮೇಲ್ವಿಚಾರಕರ ವಿರುದ್ದ ದೂರು
ನಿವೃತ್ತಿ ವೇತನದ ಫೈಲ್ಅನ್ನು ಮುಂದಕ್ಕೆ ಕಳಿಸಲು ಖಜಾನೆ ಇಲಾಖೆಯ FDA ಗುಮಾಸ್ತ M.A ರವಿಕುಮಾರ್ 7000 ರು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು,ಆದರೆ ನಿವೃತ್ತ ಅಧಿಕಾರಿಗಳು FDA ಕೋರಿಕೆ ಮೇರೆಗೆ ಮೊದಲ ಕಂತು 5000 ಲಂಚ ನೀಡುವಾಗ ACB ಅಧಿಕಾರಿಗಳ ಕೈಗೆ ಸಿಕ್ಕಾಕಿಕೊಂಡರು
ಮೈಸೂರು ವಿಭಾಗದ ACB ಎಸ್ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಗುಮಾಸ್ತ ರವಿಕುಮಾರ್ ನನ್ನು ಬಂಧಿಸಿ, ಲಂಚದ ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
- ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ
- ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ