ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಗ್ರೀನ್ ಸಿಗ್ನಲ್

Team Newsnap
1 Min Read

ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ವಿವಾದದಿಂದ ನೀಡಲಾಗಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿ ಚುನಾವಣೆಗೆ ಗ್ರೀನ್ ಸಿಗ್ನಲ್
ನೀಡಿದೆ.
ಹೈಕೋರ್ಟ್ ನ ಏಕ ಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆ ಯನ್ನು ಪೂರ್ಣಪೀಠ ತೆರವು ಮಾಡಿ ನವೆಂಬರ್ 2 ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣ ಗೊಳಿಸುವಂತೆ ನಿರ್ದೇಶನ ನೀಡಿದೆ.

ಮೀಸಲಾತಿ ನಿಗದಿ ಮಾಡಿ, ಚುನಾವಣೆಯ ದಿನಾಂಕಗಳು ಪ್ರಕಟ ಆದ‌ ನಂತರ ತಡೆಯಾಜ್ಞೆ ‌ನೀಡುವುದು
ಸರಿ ಅಲ್ಲ ಎಂದು ಕೋಟ್೯ ಹೇಳಿದೆ.

ಏಕ ಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆ ಯನ್ನು ಪ್ರಶ್ನೆ ಮಾಡಿ ಸರ್ಕಾರವೇ ಮೇಲ್ಮನವಿ ಸಲ್ಲಿಸಿತ್ತು.ತಡೆಯಾಜ್ಞೆ ತೆರವಿನಿಂದ ನಗರಸಭೆ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ರ ಚುನಾವಣೆಗಳು ಸುಸೂತ್ರವಾಗಿ ನಡೆಯಲಿವೆ.

Share This Article
Leave a comment