ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ 25 ಲಕ್ಷ ರುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿಧಾನ ಸಭಾ ಪೋಲೀಸರು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಶುಕ್ರವಾರ ಬಂಧಿಸಿದ್ದಾರೆ
ವೆಂಕಟರಮಣ ಗುರು ಪ್ರಸಾದ್ ಎಂಬ ಅಧಿಕಾರಿಯೇ ಬಂಧಿತರು.
ಕಳೆದ ವರ್ಷದ ಕರಗ ಉತ್ಸವ ವೇಳೆ ಗುರು ಪ್ರಸಾದ್ ನಡೆಸಿರುವ ಅಕ್ರಮ ಈ ಬಾರಿ ಆಡಿಟ್ ಪರಿಶೀಲನೆ ವೇಳೆ ಬಯಲಿಗೆ ಬಂದ ನಂತರ ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್ ಅರವಿಂದ್ ಬಾಬು ಪೋಲೀಸರಿಗೆ ದೂರು ನೀಡಿದ್ದರು
ಆರೋಪಿ ವೆಂಕಟರಮಣ ಬೆಂಗಳೂರು ನಗರ ವ್ಯಾಪ್ತಿಯ ದೇವಸ್ಥಾನಗಳಿಗೆ ಸೇರಿ 25 ಲಕ್ಷಕ್ಕೂ ಹೆಚ್ಚು ಹಣವನ್ನು ಡ್ರಾ ಮಾಡಿಕೊಂಡು ಸ್ವಂತ ಖಾತೆ ವರ್ಗಾವಣೆ ಮಾಡಿಕೊಂಡ ತಪ್ಪು ಲೆಕ್ಕ ನೀಡಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ
ಲೆಕ್ಕ ಪರಿಶೋಧನೆ ಪತ್ತೆಯಾದ ವಂಚನೆಯ ಬಗ್ಗೆ ವಿವರಣೆ ಕೇಳಲಾಗಿತ್ತು. ಧರ್ಮ ರಾಯನ ದೇವಸ್ಥಾನಕ್ಕೆ ಸೇರಿದ 15 . 97 ಲಕ್ಷ ರುಗಳನ್ನು ಕರಗದ ಖರ್ಚು ಎಂದು ತೋರಿಸಿದ್ದಾರೆ ಅಲ್ದೇ 10 ಗ್ರಾಂ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದರೆ.
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್
- ರೇವಣ್ಣ ಅಪಹರಣ ಕೇಸ್ : ಎಸ್ಐಟಿ ವಿಶೇಷ ತಂಡದಿಂದ 40 ಕಡೆ ರೇಡ್
- ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ