February 19, 2026

Newsnap Kannada

The World at your finger tips!

WhatsApp Image 2022 03 14 at 11.05.18 PM

ಮೇಲುಕೋಟೆಯಲ್ಲಿ(Melukote) ವೈರಮುಡಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Spread the love

ಮಂಡ್ಯ ಜಿಲ್ಲೆಯ ಮೇಲುಕೋಟೆ (Melukote) ವೈರಮುಡಿ ಉತ್ಸವಕ್ಕೆಸೋಮವಾರ ರಾತ್ರಿ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ವೈರಮುಡಿ ಬ್ರಹ್ಮೋತ್ಸವಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು

ಸಿಎಂ ಬಸವರಾಜ ಬೊಮ್ಮಾಯಿ ಜೊತೆಯಲ್ಲಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಚಿವರಾದ ಗೋಪಾಲಯ್ಯ, ನಾರಾಯಣಗೌಡ ಶಾಸಕ ಪುಟ್ಟರಾಜು, ಯದುವೀರ್ ದಂಪತಿ, ಅಧಿಕಾರಿಗಳು ಸಾಥ್ ನೀಡಿದರು

ಚಲುವನಾರಾಯಣಸ್ವಾಮಿ ಉತ್ಸವ ಮೂತಿ೯ಗೆ ವೈರಮುಡಿ ಕಿರೀಟ ಧಾರಣೆ ನಂತರ ವೈರಮುಡಿ ಉತ್ಸವವು
ದೇಗುಲದ ಹೊರಾವರಣಕ್ಕೆ ಆಗಮಿಸಿತು

ವಜ್ರ ಖಚಿತ ವೈರಮುಡಿ ಧರಿಸಿರುವ ಚಲುವನಾರಾಯಣನನ್ನು ಕಂಡು ಭಕ್ತಾದಿಗಳು ಹರ್ಷೋದ್ಘಾರ ಮಾಡಿಗೋವಿಂದ ನಾಮ ಸ್ಮರಣೆಯೊಂದಿಗೆ ಭಕ್ತಿ ಸಮರ್ಪಣೆ ಮಾಡಿದರು

ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಚಲುವನಾರಾಯಣಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು

ಸಂಪುಟ ಸಹೋದ್ಯೋಗಿಗಳ ಜೊತೆ ಮಿನಿ ಬಸ್ಸಿನಲ್ಲಿ ಮೇಲುಕೋಟೆಗೆ ಆಗಮಿಸಿದ ಸಿಎಂ. ವೈರಮುಡಿ ಉತ್ಸವ ಕಣ್ತುಂಬಿಕೊಳ್ಳಲುಹರಿದು ಬಂದ ಭಕ್ತ ಸಾಗರ.

ವರ್ಣ ರಂಜಿತ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮೇಲುಕೋಟೆ (Melukote) .

error: Content is protected !!