ಚಿತ್ತದ ಸುತ್ತ ಸುಳಿಯುತ್ತಿರುವ ಸಣ್ಣ
ಚಿಟ್ಟೆಯನ್ನ ನಿರ್ಲಕ್ಷಿಸಿ. ಪಾಪ ಎಂದು
ಮೈ-ಮರೆತೊಡೆ. ಸಣ್ಣ-ಕೀಟವೇ
ಸೊಳ್ಳೆಯಾಗಿ ಮನುಜನ ಬೆವರವಾಸನೆ
ಗ್ರಹಿಸಿ ಕಣ್ಣಿಗೆ ಕಾಣಿಸದಂತೆ..
ನೋವು ಅರಿವಿಗೆ ಬಾರದಂತೆ..
ನೆತ್ತರು ಹೀರವ ಕೀಟ..
ಗೂಡು-ಕಟ್ಟುವ ಗೋಜಿಗವಿಲ್ಲ
ಗಿಡ-ಮರಗಳಡೆಲೆವ ಪರಿಪಾಟಲಿಲ್ಲ.
ಸಂದಿ-ಗೊಂದಿಗಳಲಿ..
ತಗ್ಗು ಕೊಳಚೆಗಳಲಿ..
ನಿಂತ ತಿಳಿನೀರ ಕುಣಿಗಳಲಿ. ನೀರ
ಮೇಲಣ. ನೀರೊಳ. ಗಾಳಿಯೊಳ
ನಾಲಕ್ಕು ಹಂತದ ಜೀವನ ಚಕ್ರದಿ
ಸಂತಾನೋತ್ಪತ್ತಿಯ ಉತ್ತಾನ..
ತಿಳಿನೀರ ಮೇಲಣ ಬೆಳ್ಳಿ ಮೊಟ್ಟೆಗಳ
ಖಣಜ ಸ್ಕಲಿಸಿ ಕಪ್ಪಾಗಿ ದಿನ ಕಳೆಯಲು
ಮಿಟುಕು ಹುಳವಾಗಿ ಸಣ್ಣ ರೆಕ್ಕೆಗಳ
ಕೀಟವಾಗಿ ರೆಕ್ಕೆಗಳುದುರಿ ನೆತ್ತರು
ಹೀರುವ ಪರವಾಲಂಬಿ ರಕ್ತ-ಭಕ್ಷಾಸುರ.
ಸೊಳ್ಳೆಗಳ ನಿಗ್ರಹಿಸಲು ಹೊಗೆಯ
ಬುಗ್ಗೆಗೆ ಮೊರೆ-ಹೋಗುವ ಮನುಜ
ಕಾರ್ಬನ್ ಯುಕ್ತ ಹೊಗೆಯ ನಿಗ್ರಾಣಿಸಿ
ಶ್ವಾಸಕೋಶ ಸಂಬಂಧಿತ ದುಗುಡವ
ಭರಿಸುವ ಮನುಜ..
….✍️ ಸುರೇಶ ಫ ಮಲ್ಲಾಡದ..
ರಟ್ಟೀಹಳ್ಳಿ/ಸರ್ವಜ್ಞನ-ಮಾಸೂರು.
ಹಾವೇರಿ..
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್
- ರೇವಣ್ಣ ಅಪಹರಣ ಕೇಸ್ : ಎಸ್ಐಟಿ ವಿಶೇಷ ತಂಡದಿಂದ 40 ಕಡೆ ರೇಡ್
- ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ