ಕೇದಾರನಾಥದಲ್ಲಿ ಆದಿ ಗುರು ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ

Team Newsnap
1 Min Read

ಅದ್ವೈತ ತತ್ವ ಪ್ರತಿಪಾದಕ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥದಲ್ಲಿ ಶುಕ್ರವಾರ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

kedaranath

2013ರ ಉತ್ತರಾಖಂಡ್ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿ ಧ್ವಂಸಗೊಂಡಿತ್ತು.

ಇದೀಗ ಅದನ್ನು ಪುನರ್​ ನಿರ್ಮಾಣ ಮಾಡಲಾಗಿದೆ. ನೂತನ ಪ್ರತಿಮೆ 12 ಅಡಿ ಉದ್ದ, 9 ಅಡಿ ಅಗಲದ 28 ಟನ್ ತೂಕ ಹೊಂದಿದೆ. ಈ ಮೂತಿ೯ಗೆ ಮೋದಿ ವಿಶೇಷ ಪೂಜೆ ಸಲ್ಲಿಸಿ ಅನಾವರಣಗೊಳಿಸಿದ್ದಾರೆ.

ಬೆಳಗ್ಗೆ ಕೇದಾರನಾಥ್​ಕ್ಕೆ ಆಗಮಿಸಿದ್ದ ಮೋದಿ, ಮೊದಲು ಶಿವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಆ ಬಳಿಕ ನೂತನ ಪ್ರತಿಮೆಯನ್ನು ಉದ್ಘಾಟನೆ ಮಾಡಿ ಪ್ರರ್ಥನೆ ಸಲ್ಲಿಸಿದ್ದಾರೆ.

kedarnath

ಇನ್ನು ಈ ವಿಶೇಷ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ತಯಾರಿಸಿರುವುದು ವಿಶೇಷ ಶಂಕರಾಚಾರ್ಯರ ಪ್ರತಿಮೆಯ ಕೇದಾರನಾಥದಲ್ಲಿ ಅನಾವರಣ ಮಾಡಲಾಯಿತು.

kedaranath4

ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಕೈ ಚಳಕದಲ್ಲಿ ಮೂಡಿಬಂದಿರುವ ಪ್ರತಿಮೆ ಶಿಫ್ಟ್ ಮಾಡಿದ್ದೆ ಒಂದು ಸಾಹಸ.

Share This Article
Leave a comment