ಬೆಂಗಳೂರಿನ ಹೊಸಕೋಟೆ ದೇವಸ್ಥಾನವೊಂದರ ಕಳ್ಳತನ ಆರೋಪಿಯ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ.
ಆಂಧ್ರ ಪ್ರದೇಶ ಮೂಲದ ಆರೋಪಿ ಶಂಕರ್ ರಾಜಕಾರಣಿ ಆಗಬೇಕು ಅಂತಾ ಕನಸು ಕಂಡಿದ್ದ. ಆದರೆ ಕಳ್ಳತನದ ಹಾದಿ ಹಿಡಿದಿದು, ಕೊನೆಗೆ ಮರ್ಯಾದೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮದನಪಲ್ಲಿ ಶಂಕರ್ ತಾನು ರಾಜಕಾರಣಿಯಾಗಬೇಕು ಎಂದು ಕನಸು ಕಂಡಿದ್ದ. ಅಲ್ಲದೇ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ತಾನು ಜನಸೇವೆ ಮಾಡಿ ರಾಜಕಾರಣದಲ್ಲಿ ಹೆಸರು ಪಡಿಬೇಕು ಅಂತಾ ಅಂದ್ಕೊಂಡಿದ್ದ. ಆದರೆ ಇದಕ್ಕಾಗಿ ಶಂಕರ್ ಹಿಡಿದ ದಾರಿ ಮಾತ್ರ ಕಳ್ಳತನ ಮಾಡುವುದಾಗಿತ್ತು.
ಹೊಸಕೋಟೆ ಬಳಿಯ ದೇವಸ್ಥಾನಕ್ಕೆ ಆರೋಪಿಗಳು ಬರೋ ಮಾಹಿತಿ ಪೊಲೀಸರಿಗೆ ಬಂದಿತ್ತು. ಈ ವೇಳೆ ಹಿಡಿಯೋಕೆ ಹೋದಾಗ ಸೈನೈಡ್ ನುಂಗಿ ಆರೋಪಿ ಶಂಕರ್ ಸಾವನ್ನಪ್ಪಿದ್ದ.
ತಾನು ಕಳ್ಳ ಅಂತಾ ಗೊತ್ತಾದರೆ ಜನ ನನ್ನನ್ನು ನಂಬುವುದಿಲ್ಲ. ತಾನು ರಾಜಕಾರಣದಲ್ಲಿ ಬೆಳೆಯಲ್ಲ. ತನ್ನ ರಾಜಕೀಯ ಜೀವನಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಭಯದಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ