ರೋಹಿಣಿ ಸಿಂಧೂರಿ ಮನೇಲಿ 40 ನೌಕರರು ಕೆಲ್ಸ ಮಾಡ್ತಿದ್ದಾರೆ. ಅವರ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರೇ ಡಿಸಿ ಮನೆಗೆ ಹೋಗ್ತಾರೆ. ನಮ್ಮ ಮಕ್ಕಳು ಆನ್ ಲೈನ್ ಕ್ಲಾಸ್ ನಲ್ಲಿ ಓದಬೇಕು ನಮ್ಗೊಂದು, ಅವರಿಗೆ ಒಂದು ನ್ಯಾಯನಾ?
ಹೀಗೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ಶನಿವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಎ. ಮಂಜು, ‘ಇವತ್ತು ಡಿಸಿ ಮನೆಗೆ ಎಲ್ಲಾ ಡಿಪಾರ್ಟ್ಮೆಂಟ್ಗಳಿಂದ 10 ಜನ, 20 ಜನ.. ನನಗೆ ಗೊತ್ತಿರುವ ಮಾಹಿತಿ ಪ್ರಕಾರ 30 ರಿಂದ 40 ಜನ ಜಿಲ್ಲಾಧಿಕಾರಿಗಳ ಮನೆಯಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಮಕ್ಕಳಿಗೆಲ್ಲಾ ಆನ್ಲೈನ್ ಕ್ಲಾಸ್, ಅವರ ಮಕ್ಕಳಿಗೆಲ್ಲಾ ಮನೆಗೆ ಹೋಗಿ ಪಾಠ ಮಾಡುತ್ತಾರೆ? ಹಾಗಾದ್ರೆ ನಮ್ಮವ್ರೆಲ್ಲಾ ಮಕ್ಕಳಲ್ವಾ? ಯಾಕೆ ಈ ಇಬ್ಬಗೆಯ ತನ? ಎಂದು ಪ್ರಶ್ನೆ ಮಾಡಿದರು.
ಡಿಸಿ ಸಿಂಧೂರಿ ಹೇಳುತ್ತಾರೆ. ಆನ್ಲೈನ್ ಕ್ಲಾಸ್ ಇರಲಿ, ಅಂತರ ಇರಲಿ, ದೂರ ಇರಿ ಅಂತಾರೆ. ಡಿಸಿ ಮಕ್ಕಳಿಗೆ ಸ್ಪೆಷಲ್ಲಾ? ಇಲ್ಲಿ ಮಿಸ್ ಯೂಸ್ ಅನ್ನೋದಕ್ಕಿಂತ ಅಧಿಕಾರವನ್ನು ಹೇಗೆ ಬಳಸಿಕೊಳ್ತಾರೆ ಅನ್ನೋದು ಮುಖ್ಯ. ಅವರ ಅನುಕೂಲಕ್ಕೆ ಮಾಡಿದಾಗ ಅದು ಮಿಸ್ ಯೂಸ್ ಅಲ್ಲ, ಅದನ್ನೇ ಬೇರೆಯವರು ಮಾಡಿದ್ರೆ ಮಿಸ್ ಯೂಸ್ ಎಂದು ಕಿಡಿಕಾರಿದರು.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ