January 29, 2026

Newsnap Kannada

The World at your finger tips!

YADIYURAPPA1

ಕೊರೋನಾ ಸಂಕಷ್ಟ ಕ್ಕೆ 1250 ಕೋಟಿ ರು ಪ್ಯಾಕೇಜ್ ಘೋಷಿಸಿದ ಸಿಎಂ

Spread the love

ಕೊರೊನಾ ಎರಡನೇ ಅಲೆಯ ಸಂಕಷ್ಟದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಬುಧವಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು.

ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿ ಸಿಎಂ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮಹತ್ವದ ನಿರ್ಧಾರ ವಿವರಿಸಿದರು.

1250 ಕೋಟಿ ರು ಪ್ಯಾಕೇಜ್ :

ಲಾಕ್ ಡೌನ್ ವೇಳೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಸರ್ಕಾರದ ಧ್ಯೇಯವಾಗಿತ್ತು.

ಸರ್ಕಾರ ಸಹಾಯ ಹಸ್ತ ನೀಡಲು ನಿರ್ಧರಿಸಿದೆ. 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸುತ್ತಿದ್ದೇವೆ ಎಂದರು.

ಪರಿಹಾರ ಘೋಷಣೆಯ ಮುಖ್ಯಾಂಶಗಳು :

  • 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಣೆ
  • ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪರಿಹಾರ ನೀಡುತ್ತಿದ್ದೇವೆ. 12.73 ಕೋಟಿ ಹಣವನ್ನು ಇದಕ್ಕೆ ಮೀಸಲಿಡಲಾಗಿದೆ.
  • ಹಣ್ಣು, ತರಕಾರಿ ಬೆಳೆಗಾರರಿಗೆ 10 ಸಾವಿರ ಪರಿಹಾರ ಘೋಷಣೆ. ಇದಕ್ಕೆ 70 ಕೋಟಿ ಮೀಸಲು.
  • ಅಟೋ, ಓಲಾ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ಪರಿಹಾರ
  • ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರು ಪರಿಹಾರ
  • ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ಪರಿಹಾರ.
  • ಸವಿತಾ ಸಮಾಜಕ್ಕೆ 2 ಸಾವಿರ, ಪರಿಹಾರ.
  • ಕಲಾವಿದರಿಗೆ 3 ಸಾವಿರ ಪರಿಹಾರ.
  • ರೈತರಿಗೆ ದೀರ್ಘಾವಧಿಯ ಸಾಲ 2021 ರ ಜುಲೈ 31 ರ ತನಕ ಮರುಪಾವತಿಗೆ ವಿಸ್ತರಣೆ. ಇದಕ್ಕೆ 135 ಕೋಟಿ ವೆಚ್ಚ.
  • ಬಿಪಿಎಲ್‌ ಕಾರ್ಡ್‌ದಾರರಿಗೆ 10 ಕೆಜಿ ಪಡಿತರ ವಿತರಣೆ
  • ಎಪಿಎಲ್‌ ಕಾರ್ಡ್‌ದಾರರಿಗೆ 15 ರೂ.ನಲ್ಲಿ ಅಕ್ಕಿ ವಿತರಣೆ
  • ಮೇ, ಜೂನ್ ತಿಂಗಳಲ್ಲಿ ಉಚಿತ ಪಡಿತರ ನೀಡಲು ತೀರ್ಮಾನ
error: Content is protected !!