- ನನ್ನ ಗಮನಕ್ಕೆ ತಾರದೇ 1200 ಕೋಟಿ ರು ಅನುದಾನ ಹಂಚಿಕೆ
- ಬಿಜೆಪಿ ಹೈಕಮಾಂಡ್ ಗೆ 2 ಪುಟದ ದೂರು ಸಲ್ಲಿಕೆ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಿಎಂ ಬಿಎಸ್ ವೈ ವಿರುದ್ದವೇ ತೊಡೆ ತಟ್ಟಿದ್ದಾರೆ.
ಸಚಿವ ಈಶ್ವರಪ್ಪನವರ ಗಮನಕ್ಕೆ ಬಾರದೇ ಆರ್ಡಿಪಿಆರ್ ಇಲಾಖೆಯ ಅನುದಾನವನ್ನು ಸಿಎಂ ಬಿ.ಎಸ್. ಯಡಿಯೂರಪ್ಪನವರು ಹಂಚಿದ್ದಾರೆ ಎಂದು ರಾಜ್ಯಪಾಲರೂ ಸೇರಿದಂತೆ ಕೇಂದ್ರದ ನಾಯಕರಿಗೆ ದೂರು ನೀಡಿದ್ದಾರೆ.
ಈಶ್ವರಪ್ಪ ದೂರಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಮಾಡಿದ ಆದೇಶವನ್ನು ತಡೆಹಿಡಿಯಿರಿ ಎಂದು ಈಶ್ವರಪ್ಪನವರಿಗೆ ಸಲಹೆ ನೀಡಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮತ್ತು ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಸಿಟಿ ರವಿ ಸಹ ಸಹ ಆದೇಶಕ್ಕೆ ಸಹಿ ಹಾಕಬಾರದೆಂದು ಆರ್ಡಿಪಿಆರ್ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಈಶ್ವರಪ್ಪ ಸೂಚನೆ ನೀಡದ ಹಿನ್ನೆಲೆ ಆರ್ಡಿಪಿಆರ್ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರಿಗೆ ಸಿಎಂ ಬಿಎಸ್ವೈ ತರಾಟೆ ತೆಗೆದುಕೊಂಡಿದ್ದಾರಂತೆ.
ಎಲ್ಕೆ ಅತೀಕ್ ಅವರನ್ನು ಕಚೇರಿಗೆ ಕರೆಸಿದ ದಿಎಂ ನನ್ನ ಮಾತಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರಂತೆ. ಇದಕ್ಕೆ ಈಶ್ವರಪ್ಪ ಸಹಿ ಹಾಕುವುದು ಬೇಡವೆನ್ನುತ್ತಿದ್ದಾರೆಂದು ಸಿಎಂಗೆ ಎಲ್ಕೆ ಅತೀಕ್ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.
ಹೈಮಾಂಡ್ ಸೂಚನೆ ಮೇರೆಗೆ ಅನುದಾನ ಹಂಚಿಕೆ ತಡೆ ಹಿಡಿದಿರುವ ಈಶ್ವರಪ್ಪ ಕಡತಕ್ಕೆ ಸಹಿ ಹಾಕದೇ ಸಿಎಂ ವಿರುದ್ಧ ತೊಡೆ ತಟ್ಟಿದ್ದಾರೆ ಎನ್ನಲಾಗಿದೆ.
ಅನುದಾನದ ಬಗ್ಗೆ ಕೆಲವು ಶಾಸಕರಿಂದ ಸಚಿವ ಈಶ್ವರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ನನ್ನ ಎಲ್ಲಾ ಹಕ್ಕನ್ನು ಸಿಎಂ ಕಿತ್ತುಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ಬೇಸರ ಹೊರಹಾಕಿದ್ದಾರೆ.
ಅನುದಾನ ತಾರತಮ್ಯದ ಬಗ್ಗೆ ಸಿಎಂ ಬಳಿಯೇ ಮಾತನಾಡಿ ಎಂದು ಈಶ್ವರಪ್ಪ ಶಾಸಕರಿಗೆ ಹೇಳಿದ್ದಾರಂತೆ. ಈಶ್ವರಪ್ಪನವರ ಅನುದಾನದ ದೂರಿನ ಬಗ್ಗೆ ಅಮಿತ್ ಶಾ, ಮೋದಿ ಪ್ರತಿಕ್ರಿಯೆ ನೀಡಿ, ನಿಮ್ಮ ದೂರ ಸ್ವೀಕೃತಿಯಾಗಿದೆ ಎಂದು ಸ್ವೀಕೃತ ಪತ್ರ ಕಳುಹಿಸಿದ್ದಾರೆಂದು ಹೇಳಲಾಗಿದೆ.
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್
- ರೇವಣ್ಣ ಅಪಹರಣ ಕೇಸ್ : ಎಸ್ಐಟಿ ವಿಶೇಷ ತಂಡದಿಂದ 40 ಕಡೆ ರೇಡ್
- ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ