ತಮಿಳುನಾಡಿಗೆ ಸೆಪ್ಟೆಂಬರ್ ನಲ್ಲಿ 6 ರಿಂದ 7 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.
ತಮಿಳುನಾಡು ಸಲ್ಲಿಸಿದ ನೀರು ಬಿಡುಗಡೆಯ ಅರ್ಜಿ ಪರಿಶೀಲನೆ ಮಾಡಲು ಸಭೆ ಸೇರಿದ್ದ ಸದಸ್ಯರು ಈ ನಿರ್ಧಾರ ಕೈಗೊಂಡರು.
ಜೂನ್, ಜುಲೈ ,ಆಗಸ್ಟ್ ನಲ್ಲಿ 27 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ಈಗ ಸಧ್ಯಕ್ಕೆ 6ರಿಂದ 7 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ.
ಕೃಷ್ಣರಾಜಸಾಗರ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿದಿದೆ. ಮಳೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವೂ ಕೂಡ ಕುಸಿದಿದೆ. ಇಂದಿನ ನೀರಿನ ಮಟ್ಟ 117 ಅಡಿ ಆಸುಪಾಸಿನಲ್ಲಿದೆ.