ವಿದರ್ಭ ವಿರುದ್ಧ 4 ರನ್​​ ರೋಚಕ ಜಯ; ಫೈನಲ್‌ಗೆ ಕರ್ನಾಟಕ

Team Newsnap
1 Min Read

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್‌ನಲ್ಲಿ ವಿದರ್ಭ ತಂಡದ ವಿರುದ್ಧ ಕರ್ನಾಟಕ 4 ರನ್‌ಗಳ ರೋಚಕ ಜಯ ಸಾಧಿಸಿದೆ.

ಈ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮೊದಲು ಬ್ಯಾಟಿಂಗ್​​ ಮಾಡಿದ ಕರ್ನಾಟಕ ವಿದರ್ಭ ತಂಡಕ್ಕೆ 177 ರನ್‌ಗಳ ಕಠಿಣ ಗುರಿ ನೀಡಿತ್ತು.

ಈ ಗುರಿ ಬೆನ್ನತ್ತಿದ ವಿದರ್ಭ ತಂಡವು ನಿಗದಿತ 20 ಓವರ್​​ನಲ್ಲಿ 6 ವಿಕೆಟ್​​ ನಷ್ಟಕ್ಕೆ 172 ರನ್​​ ಪೇರಿಸಿತು. ಟಾರ್ಗೆಟ್​ ರೀಚ್​​ ಮಾಡಲಾಗದೆ ವಿದರ್ಭ ಕೊನೆಗೂ ಕರ್ನಾಟಕ ಎದುರು ಸೋಲುಂಡಿತ್ತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ ನಾಯಕ ಮನೀಶ್ ಪಾಂಡೆ 54, ರೋಹನ್ ಕದಂ 87 ಗಳಿಸಿದರು. ಅಭಿನವ್ ಮನೋಹರ್ ಕೇವಲ 13 ಎಸೆತಗಳಲ್ಲಿ 27 ರನ್ ಸಿಡಿಸುವ ಮೂಲಕ ಉತ್ತಮ ಪೇರಿಸಲು ನೆರವಾದರು.

ವಿದರ್ಭ ತಂಡದ ಪರ ಅಥರ್ವ ತೈಡೆ 32, ಗಣೇಶ್ ಸತೀಷ್ 31, ಅಕ್ಷಯ್ ವಾಡೆಕರ್ 15, ಶುಭಂ ದುಬೆ 24, ಕಾರ್ನೆವರ್ 22, ಅಪೂರ್ವ್‌ ವಾಂಖಡೆ ಅಜೇಯ 27 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

Share This Article
Leave a comment