February 20, 2026

Newsnap Kannada

The World at your finger tips!

BJP , JDS , alliance

ಸಿಎಂ ಕಚೇರಿ ಸಿಬ್ಬಂದಿಗೆ 30 ಲಕ್ಷ ಲಂಚ ಕೊಟ್ಟರೆ ಕೆಲಸ – ಮಾಜಿ ಸಿಎಂ ಆರೋಪ

Spread the love

ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಸಿದ್ದರಾಮಯ್ಯ ಕಚೇರಿಯಲ್ಲಿ ಲಂಚ ಕೊಡದೇ ಕೆಲಸ ಆಗೋದಿಲ್ಲ ಎಂದು ಆರೋಪಿಸಿ ಹೊಸ ಬಾಂಬ್ ಸ್ಪೋಟಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ಸಿಎಂ ಕಚೇರಿಯಲ್ಲಿ ಲಂಚ ಕೊಡದೇ ಯಾವುದೇ ಕೆಲಸ ಆಗಲ್ಲ. ಶಾಸಕರು ಕೊಟ್ಟ ಪತ್ರ ತೆಗೆದುಕೊಂಡು ಹೋದರು ಕೆಲಸ ಮಾಡಿಕೊಡದೇ ಲಂಚಕ್ಕೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಆರೋಪಿಸಿದರು.

ಕೇವಲ ಶಾಸಕರ ಪತ್ರ ತೆಗೆದುಕೊಂಡು ಬಂದರೆ ಆಗಲ್ಲ. ಅದರ ಜೊತೆ 30 ಲಕ್ಷ ಹಣ ತರಬೇಕು ಎಂದು ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಬೇಡಿಕೆ ಇಡುತ್ತಾರೆ. 30 ಲಕ್ಷ ಹಣ ತಂದರೆ ಮಾತ್ರ ಕೆಲಸ ಎಂದು ಸಿಎಂ ಕಚೇರಿಯಲ್ಲಿ ಹೇಳುತ್ತಾರೆ.ನಾಗಮಂಗಲದಲ್ಲಿ ಗ್ರಾಮ ಲೆಕ್ಕಿಗ ಫೋನ್​ ಪೇಯಿಂದ 66 ಸಾವಿರ ರು ಲಂಚ : ಡಿ ಸಿ ಗೆ ದೂರು

ಯಾವ ಶಾಸಕರ ಪತ್ರ ಅಂತ ನೇರವಾಗಿ ಹೇಳದ ಕುಮಾರಸ್ವಾಮಿ ಸಿಎಂ ಕಚೇರಿಯಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ ಎಂದು ಮತ್ತೆ ವೈಎಸ್‌ಟಿ ಟ್ಯಾಕ್ಸ್ ಆರೋಪ ಮಾಡಿದರು.

error: Content is protected !!