ರಷ್ಯಾ, ಉಕ್ರೇನ್ ಮೇಲೆ ಯುದ್ದ ಆರಂಭಿಸಿದ ನಂತರ ಅಲ್ಲಿನ ಕನ್ನಡಿಗರ ಪಾಡು ಹೇಳ ತೀರದ್ದಾಗಿದೆ.
ಯುದ್ದದ ಭೀಕರತೆಯ ನಡುವೆಯೇ ಸಿಲುಕಿಕೊಂಡಿರುವ 137 ಕನ್ನಡಿಗರನ್ನು ರಕ್ಷಣೆ ಮಾಡಬೇಕಿದೆ. ಮೈಸೂರು 14 , ಬಾಗಲಕೋಟೆ 14 , ಬೆಂಗಳೂರು 17 ದಾವಣಗೆರೆ ಹಾಗೂ ಕೊಡಗಿನ 4 ಸೇರಿದಂತೆ ರಾಜ್ಯದಾದ್ಯಂತ 20 ಜಿಲ್ಲೆಗಳ 137 ಮಂದಿಯನ್ನು ರಕ್ಷಣೆ ಮಾಡಬೇಕಾಗಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ 14 ವಿದ್ಯಾರ್ಥಿಗಳನ್ನು ಜಿಲ್ಲೆಗೆ ಸುರಕ್ಷಿತವಾಗಿ ಕರೆತರುವಂತೆ ಐಎಫ್ಎಸ್ ಅಧಿಕಾರಿ ಡಾ.ಮನೋಜ್ ರಾಜನ್ಗೆ ಜಿಲ್ಲಾಧಿಕಾರಿ ಕ್ಯಾ.ಕೆ. ರಾಜೇಂದ್ರ ಮನವಿ ಮಾಡಿದ್ದಾರೆ.
ಕಾರ್ಕೆವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿಗಳೆಲ್ಲ ಎಂಬಿಬಿಎಸ್ ಓದುವ ಸಲುವಾಗಿ ಅಲ್ಲಿಗೆ ಹೋಗಿದ್ದರು .
ಸದ್ಯ ದೇಶಕ್ಕೆ ಮರಳುವ ಮುನ್ನವೇ ಯುದ್ಧ ಆರಂಭವಾಗಿದೆ. ಹೀಗಾಗಿ ಉಕ್ರೇನ್ನ ಮೆಟ್ರೋ ಸ್ಟೇಷನ್ ಸುರಂಗದಲ್ಲಿ ಅಡಗಿ ಕೂತಿದ್ದಾರೆ
ಬಾಗಲಕೋಟೆ ನಗರದ ಮನೋಜ್ ಚಿತ್ರಗಾರ, ಅಪೂರ್ವ ಕದಾಂಪುರ, ಪ್ರಸಾದಪ್ರಕಾಶ್ ಬಂಗಾರಶೆಟ್ಟಿ, ರಬಕವಿ ನಗರದ ಆಶ್ವತ್ ಗಂಗಪ್ಪ ಗುರವ, ಜಗದಾಳ ಗ್ರಾಮದ ಕಿರಣ ಸಿಂಗಾಡಿ, ನಾವಲಗಿ ಗ್ರಾಮದ ಕಿರಣ ಲಕ್ಷ್ಮಣ ಸವದಿ, ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದ ಸ್ಫೂರ್ತಿ ದೊಡ್ಮನಿ, ಜಿಲ್ಲೆಯ ಶುಷ್ಮಾ ನ್ಯಾಮಗೌಡ, ರೋಹಿತ್ ಹಿಪ್ಪರಗಿ, ಅನಿಕೇತ್ ಶೀಪರಮಟ್ಟಿ, ಪ್ರಜ್ವಲ ಹಿಪ್ಪರಗಿ, ಚೇತನಾ ಶ್ರೀಶೈಲ ಮಾಗಿ, ಸಹನಾ ಮಲ್ಲನಗೌಡ ಪಾಟೀಲ, ಅಶ್ವನಿ ಶಿವಾಜಿ ಯಾದವಾಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಆತಂಕ ಶುರುವಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ