ತಿರುಪತಿ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದವನ ಮನೆಯಲ್ಲಿ 10 ಲಕ್ಷ ರು ಸಿಕ್ತು !

Team Newsnap
1 Min Read

ತಿರುಪತಿ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಬಳಿ ಎರಡು ಟ್ರಂಕ್ ನಲ್ಲಿ ಸಿಕ್ಕಿತು 10 ಲಕ್ಷ ರು.

ಕಳೆದ ವರ್ಷ ಬಿಕ್ಷುಕ ಶ್ರೀನಿವಾಸ್ ಅನಾರೋಗ್ಯದಿಂದ ಮೃತಪಟ್ಟಿದ್ದನು. ಹೀಗಾಗಿ ಆತನ ಕುಟುಂಬದ ಸದಸ್ಯರು ಯಾರೂ ಇಲ್ಲವೆಂಬುದನ್ನು ಅರಿತ ಟಿಟಿಡಿ ಅಧಿಕಾರಿಗಳು, ಆತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ 2 ಟ್ರಂಕ್ ಬಾಕ್ಸ್ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಸಿಕ್ಕಿವೆ.

ಈ ನೋಟುಗಳನ್ನು ಎಣಿಸಿದಾಗ ಸುಮಾರು 10 ಲಕ್ಷ ರು. ಇರುವುದು ಗೊತ್ತಾಗಿದೆ. ಅಲ್ಲದೆ 1,000 ಮುಖಬೆಲೆಯ ರದ್ದಾದ ನೋಟುಗಳು ಕೂಡ ಇದ್ದವು. ಹಾಗೆಯೇ 2 ಸಾವಿರ ಮುಖಬೆಲೆಯ ನೋಟುಗಳು ಕೂಡ ಸಾಕಷ್ಟಿದ್ದವು. ಸದ್ಯ ಅಧಿಕಾರಿಗಳು ಹಣವನ್ನು ಮುಟ್ಟುಗೋಲು ಹಾಕಿ ಟಿಟಿಡಿ ಖಜಾನೆ ಸೇರಿಸಿದ್ದಾರೆ.

Share This Article
Leave a comment