ರಿಷಿಕೇಶದ ಗವಿಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ರಿಷಿಕೇಶದ ಸಾಧು ವಿಎಚ್ಪಿಗೆ ಒಂದು ಕೋಟಿ ರು. ಕೊಟ್ಟಿರುವುದಾಗಿ ವರದಿಯಾಗಿದೆ.
‘ಸುಮಾರು 50 ವರ್ಷಗಳಿಂದ ನಾನು ಗುಹೆಯಲ್ಲಿಯೇ ವಾಸಿಸುತ್ತಿದ್ದೇನೆ. ಗವಿಗೆ ಭೇಟಿ ನೀಡುವ ಭಕ್ತರು ನೀಡುವ ಕಾಣಿಕೆಗಳಿಂದ ನಾನು ಬದುಕುತ್ತಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ವಿಎಚ್ಪಿ ನಡೆಸುತ್ತಿರುವ ಅಭಿಯಾನದ ಬಗ್ಗೆ ತಿಳಿಯುತ್ತಿದ್ದಂತೆ ದೇಣಿಗೆ ನೀಡಲು ನಾನು ನಿರ್ಧರಿಸಿದೆ’ ಎಂದು ಸ್ವಾಮಿ ಶಂಕರ್ ದಾಸ್ ಹೇಳಿದ್ದಾರೆ.
ಸಾಧುವೊಬ್ಬರು 1 ಕೋಟಿ ರು ಮೊತ್ತದ ಚೆಕ್ ನೀಡಿದ್ದಾರೆ. ಖಾತೆಯಲ್ಲಿ ಅಷ್ಟು ಹಣ ಇರುವುದು ಖಾತ್ರಿಯಾಗಿದೆ. ಅನಂತರ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಸ್ಥಳೀಯರನ್ನು ಅಧಿಕಾರಿಗಳು ಬ್ಯಾಂಕ್ಗೆ ಕರೆಸಿ, ರಾಮ ಮಂದಿರ ಟ್ರಸ್ಟ್ಗೆ ಸ್ವಾಮಿ ಶಂಕರ್ ದಾಸ್ ದೇಣಿಗೆ ನೀಡಲು ನೆರವಾಗಿದ್ದಾರೆ.
ಉತ್ತರಾಖಂಡದಲ್ಲಿ ವಿಎಚ್ಪಿ ಒಟ್ಟಾರೆ 5 ಕೋಟಿ ರು ದೇಣಿಗೆ ಸಂಗ್ರಹಿಸಿದೆ.
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್