February 20, 2026

Newsnap Kannada

The World at your finger tips!

PFI , Ram mandir , Arrest

ram mandir in ramnagar karnataka

ಗುಹೆಯಲ್ಲಿ ವಾಸಿಸುವ ಸಾಧುವಿನಿಂದ ರಾಮಮಂದಿರ ನಿರ್ಮಾಣ ಕ್ಕೆ 1ಕೋಟಿ ರು ದೇಣಿಗೆ

Spread the love

ರಿಷಿಕೇಶದ ಗವಿಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ರಿಷಿಕೇಶದ ಸಾಧು ವಿಎಚ್‌ಪಿಗೆ ಒಂದು ಕೋಟಿ ರು. ಕೊಟ್ಟಿರುವುದಾಗಿ ವರದಿಯಾಗಿದೆ.

‘ಸುಮಾರು 50 ವರ್ಷಗಳಿಂದ ನಾನು ಗುಹೆಯಲ್ಲಿಯೇ ವಾಸಿಸುತ್ತಿದ್ದೇನೆ. ಗವಿಗೆ ಭೇಟಿ ನೀಡುವ ಭಕ್ತರು ನೀಡುವ ಕಾಣಿಕೆಗಳಿಂದ ನಾನು ಬದುಕುತ್ತಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ವಿಎಚ್‌ಪಿ ನಡೆಸುತ್ತಿರುವ ಅಭಿಯಾನದ ಬಗ್ಗೆ ತಿಳಿಯುತ್ತಿದ್ದಂತೆ ದೇಣಿಗೆ ನೀಡಲು ನಾನು ನಿರ್ಧರಿಸಿದೆ’ ಎಂದು ಸ್ವಾಮಿ ಶಂಕರ್‌ ದಾಸ್‌ ಹೇಳಿದ್ದಾರೆ.

ಸಾಧುವೊಬ್ಬರು 1 ಕೋಟಿ ರು ಮೊತ್ತದ ಚೆಕ್‌ ನೀಡಿದ್ದಾರೆ. ಖಾತೆಯಲ್ಲಿ ಅಷ್ಟು ಹಣ ಇರುವುದು ಖಾತ್ರಿಯಾಗಿದೆ. ಅನಂತರ ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗಿಯಾಗುವ ಸ್ಥಳೀಯರನ್ನು ಅಧಿಕಾರಿಗಳು ಬ್ಯಾಂಕ್‌ಗೆ ಕರೆಸಿ, ರಾಮ ಮಂದಿರ ಟ್ರಸ್ಟ್‌ಗೆ ಸ್ವಾಮಿ ಶಂಕರ್ ದಾಸ್‌ ದೇಣಿಗೆ ನೀಡಲು ನೆರವಾಗಿದ್ದಾರೆ.

ಉತ್ತರಾಖಂಡದಲ್ಲಿ ವಿಎಚ್‌ಪಿ ಒಟ್ಟಾರೆ 5 ಕೋಟಿ ರು ದೇಣಿಗೆ ಸಂಗ್ರಹಿಸಿದೆ.

error: Content is protected !!