ರಿಷಿಕೇಶದ ಗವಿಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ರಿಷಿಕೇಶದ ಸಾಧು ವಿಎಚ್ಪಿಗೆ ಒಂದು ಕೋಟಿ ರು. ಕೊಟ್ಟಿರುವುದಾಗಿ ವರದಿಯಾಗಿದೆ.
‘ಸುಮಾರು 50 ವರ್ಷಗಳಿಂದ ನಾನು ಗುಹೆಯಲ್ಲಿಯೇ ವಾಸಿಸುತ್ತಿದ್ದೇನೆ. ಗವಿಗೆ ಭೇಟಿ ನೀಡುವ ಭಕ್ತರು ನೀಡುವ ಕಾಣಿಕೆಗಳಿಂದ ನಾನು ಬದುಕುತ್ತಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ವಿಎಚ್ಪಿ ನಡೆಸುತ್ತಿರುವ ಅಭಿಯಾನದ ಬಗ್ಗೆ ತಿಳಿಯುತ್ತಿದ್ದಂತೆ ದೇಣಿಗೆ ನೀಡಲು ನಾನು ನಿರ್ಧರಿಸಿದೆ’ ಎಂದು ಸ್ವಾಮಿ ಶಂಕರ್ ದಾಸ್ ಹೇಳಿದ್ದಾರೆ.
ಸಾಧುವೊಬ್ಬರು 1 ಕೋಟಿ ರು ಮೊತ್ತದ ಚೆಕ್ ನೀಡಿದ್ದಾರೆ. ಖಾತೆಯಲ್ಲಿ ಅಷ್ಟು ಹಣ ಇರುವುದು ಖಾತ್ರಿಯಾಗಿದೆ. ಅನಂತರ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಸ್ಥಳೀಯರನ್ನು ಅಧಿಕಾರಿಗಳು ಬ್ಯಾಂಕ್ಗೆ ಕರೆಸಿ, ರಾಮ ಮಂದಿರ ಟ್ರಸ್ಟ್ಗೆ ಸ್ವಾಮಿ ಶಂಕರ್ ದಾಸ್ ದೇಣಿಗೆ ನೀಡಲು ನೆರವಾಗಿದ್ದಾರೆ.
ಉತ್ತರಾಖಂಡದಲ್ಲಿ ವಿಎಚ್ಪಿ ಒಟ್ಟಾರೆ 5 ಕೋಟಿ ರು ದೇಣಿಗೆ ಸಂಗ್ರಹಿಸಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ