ಯುವತಿಯ ನಗ್ನ ವಿಡಿಯೋ ರೆಕಾರ್ಡ್ : ಬ್ಲಾಕ್ ಮೇಲ್ ಮಾಡಿದ ಪ್ರಿಯತಮನೇ ವಿಲನ್

Team Newsnap
3 Min Read

ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡಿ ಪ್ರಿಯತಮನೇ ದುಡ್ಡು ಕಿತ್ತು ಪೀಡಿಸಿದ ಪ್ರಕರಣ ಜರುಗಿದೆ.

ಸಾಮಾಜಿಕ ಜಾಲ ತಾಣದ ಮೂಲಕ ಆರಂಭವಾದ ಬೆಂಗಳೂರು ಟು ಮೈಸೂರು ಲವ್ ಸ್ಟೋರಿ ದುರಂತವಾಗಿದೆ

ಅಪ್ಪ – ಅಮ್ಮನ್ನು ಮೀಟ್ ಮಾಡಿಸ್ತಿನಿ ಬಾ ಅಂದಿದ್ದ ಪ್ರಿಯತಮನೇ ಪ್ರೀತಿಸಿದವಳ ಬಾಳಿಗೆ ವಿಲನ್ ಆಗ್ಬಿಟ್ಟಿದ್ದ.

ಭಾವಿ ಅತ್ತೆ ಮಾವನ್ನು ನೋಡಿ ಮಾತನಾಡಿಸುವ ಖುಷಿಯಲ್ಲಿ ಬೆಂಗಳೂರಿಂದ ಮೈಸೂರು ಬಸ್ ಹತ್ತಿದ ಯುವತಿ ವಾಪಸ್ ಹೋಗಿದ್ದು ಪೊಲೀಸ್ ಸ್ಟೇಷನ್ ಗೆ!

ಇನ್​​ಸ್ಟಾಗ್ರಾಮ್​​ ಗೆಳೆಯ ಲವ್​ ಮಾಡ್ತೀನಿ ಅಂತಾ ಹೇಳಿ, ಯುವತಿಯ ಬೆತ್ತಲೇ ವಿಡಿಯೋ ರೆಕಾರ್ಡ್​ ಮಾಡಿ ವಂಚನೆ ಮಾಡಿರುವ ಘಟನೆ ನಡೆದಿದೆ.

ಬಸನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಯುವತಿಗೆ ಮೈಸೂರಿನ ಹರ್ಷಿತ್ ಎಂಬಾತನ ಪ್ರೀತಿ ಹೆಸರಿನಲ್ಲಿ ವಂಚನೆ ಮಾಡಿದ್ದಾನೆ. ಅಲ್ಲದೇ ಬೆತ್ತಲೇ ವಿಡಿಯೋ ರೆಕಾರ್ಡ್​​ ಮಾಡಿ, ಯುವತಿಗೆ ಲೈಂಗಿಕ ಕಿರುಕುಳ ನೀಡಿ ಆರೇಳು ತಿಂಗಳುಗಳಿಂದ ಹಣವನ್ನೂ ವಸೂಲಿ ಮಾಡಿದ್ದಾನೆ.

ಪ್ರಕರಣದ ವಿವರ :

ಕಳೆದ ವರ್ಷ ಬೆಂಗಳೂರಿನ 21 ವರ್ಷದ ಯುವತಿಗೆ ಮೈಸೂರಿನ ಹರ್ಷಿತ್​ ಎಂಬ ಯುವಕನೊಂದಿಗೆ ಇನ್​​ಸ್ಟಾಗ್ರಾಮ್​ ಮೂಲಕ ಪರಿಚಯವಾಗಿತ್ತು.

ಇನ್​​ಸ್ಟಾದಲ್ಲಿ ಆರಂಭವಾದ ಸ್ನೇಹ ಸಮಯ ಕಳೆಯುತ್ತಿದಂತೆ ಪ್ರೀತಿಯಾಗಿ ಮಾರ್ಪಾಡಾಗಿತ್ತು. ಈ ನಡುವೆ ಇಬ್ಬರ ಮೊಬೈಲ್​ ನಂಬರ್​ಗಳು ಕೂಡ ಎಕ್ಸ್​​​ಚೇಂಜ್​​​ ಆಗಿದ್ದವು. ಕಳೆದ ಐದಾರು ತಿಂಗಳುಗಳಿಂದ ವಾಟ್ಸಾಪ್​​ನಲ್ಲಿ ಚಾಟ್​ ಮಾಡಲು ಆರಂಭ ಮಾಡಿದ್ದರು.

ಈ ನಡುವೆ ಆರೋಪಿ ಯುವಕ ಚಿರಾಗ್​ ಯುವತಿಗೆ ಪ್ರಪೋಸ್​ ಮಾಡಿದ್ದ. ಅಲ್ಲದೇ ನನ್ನ ಪೋಷಕರನ್ನು ಒಪ್ಪಿಸಿ ನಿನ್ನನ್ನು ಮದುವೆಯಾಗುತ್ತೀನಿ ಅಂತಾ ಯುವತಿಯ ಮನವೊಲಿಸಿದ್ದನಂತೆ.

ಈ ನಡುವೆ ಯುವತಿಗೆ ನಮ್ಮ ಪೋಷಕರಿಗೆ ನಿನ್ನನ್ನು ಪರಿಚಯ ಮಾಡಿಕೊಡುತ್ತೇನೆ. ಅದ್ಕೆ ನೀನು ಮೈಸೂರಿಗೆ ಬರಬೇಕು ಎಂದು ಯುವತಿಗೆ ಆಹ್ವಾನ ನೀಡಿದ್ದನಂತೆ.

ಆತನ ಮಾತು ನಂಬಿದ್ದ ಯುವತಿ ಕಳೆದ ಆರು ತಿಂಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದಳು. ಆದರೆ ಆ ವೇಳೆ ನೀನು ಬರೋದು ತುಂಬಾ ತಡ ಆಗಿದೆ. ಇವತ್ತು ನೀನು ಹೋಟೆಲ್​​ನಲ್ಲಿ ಇರು, ನಾಳೆ ಬೆಳಗ್ಗೆ ನಿನ್ನನ್ನು ಮನೆಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿ ಆಕೆನ್ನು ಹೋಟೆಲ್​​ನಲ್ಲಿ ಇರಿಸಿದ್ದನಂತೆ. ಈ ವೇಳೆ ಚಿರಾಗ್​ ಯುವರಿಗೆ ಮತ್ತು ಬರೋ ಜ್ಯೂಸ್​ ಕುಡಿಸಿ ಆಕೆ ಪ್ರಜ್ಞೆ ತಪ್ಪುವಂತೆ ಮಾಡಿದ್ದು, ಬಳಿಕ ತನ್ನ ಸ್ನೇಹಿತ ಹರ್ಷಿತ್​​ನನ್ನು ರೂಮ್​ಗೆ ಕರೆಯಿಸಿಕೊಂಡಿದ್ದ. ಈ ವೇಳೆ ಇಬ್ಬರು ಸೇರಿ ಯುವತಿಯನ್ನು ಬೆತ್ತಲೆ ಮಾಡಿ ಫೋಟೋ ಹಾಗೂ ವಿಡಿಯೋ ಶೂಟ್​ ಮಾಡಿಕೊಂಡಿದ್ದರಂತೆ.

ಯುವತಿಗೆ ಬೆಳಗ್ಗೆ ಎಚ್ಚರವಾದಾಗ ಹೊಟೇಲ್​​​​ ರೂಮ್​​ನಲ್ಲಿ ಯುವತಿ ವಿವಸ್ತ್ರಗಳಾಗಿ ಇರುವುದನ್ನು ಕಂಡು ಶಾಕ್​ ಆಗಿದ್ದಾಳೆ. ಆದರೆ ಮೊದಲೇ ಸಂಚು ಮಾಡಿದ್ದ ಆರೋಪಿಗಳು ಯುವತಿಗೆ ಫೋಟೋ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ನೀಡಿದ್ದಳಂತೆ.

ಆರೋಪಿಗಳು ಕಳೆದ ವಾರ ಕೂಡ ಬೆಂಗಳೂರಿಗೆ ಆಗಮಿಸಿ, ಮೆಜೆಸ್ಟಿಕ್ ಬಳಿಯ ಹೋಟೆಲ್​​ವೊಂದಕ್ಕೆ ಯುವತಿಯನ್ನು ಕರೆಸಿದ್ದರಂತೆ. ಈ ವೇಳೆ ಯುವತಿಯ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು ಮತ್ತೆ ಆಕೆಯನ್ನು ಬೆತ್ತಲು ಮಾಡಿ ದಿನವಿಡಿ ಕೂಡಿಟ್ಟ ಪಾಪಿಗಳು, ಕುತ್ತಿಗೆ ಮೇಲೆ ಚಾಕು ಇಟ್ಟು ನಿನ್ನ ಕುಟುಂಸ್ಥರಿಗೆ ಕರೆ ಮಾಡಿ ಹಣ ತಂದುಕೊಡುವಂತೆ ಬೆದರಿಕೆ ಹಾಕಿದ್ದಾಳೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದು ಯುವತಿ ನೇರ ಪೋಷಕರ ಬಳಿ ಹೋಗಿ ನಡೆದ ಒಂದು ವರ್ಷದಿಂದ ನಡೆದ ಹಿಂಸೆಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಪೊಲೀಸರು ಯುವತಿಯೊಂದಿಗೆ ಬಂದು ಬಸವನಗುಡಿ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಗಂಭೀರತೆಯನ್ನು ಅರಿತು ಪೊಲೀಸರು ಆರೋಪಿಗಳಾದ ಚಿರಾಗ್​ ಹಾಗೂ ಹರ್ಷಿತ್​​ನನ್ನು ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದಾರೆ. ಯುವತಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಐಪಿಸಿ 323, 506, 354 ಸೆಕ್ಷನ್ ಅಡಿ ಎಫ್​​ಐಆರ್ ದಾಖಲು ಮಾಡಿಕೊಂಡಿದ್ದಾರೆ.

Share This Article
Leave a comment