ಜುಲೈ 25 ರಂದು ಬಿಜೆಪಿ ಹೈಕಮ್ಯಾಂಡ್ ಸೂಚಿಸುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಮೂಲಕ ಜುಲೈ 26 ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಸ್ವತಃ ಯಡಿಯೂರಪ್ಪ ನವರೇ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ನೂರಾರು ಮಠಗಳ ಗುರುಗಳೂ ಸೇರಿದಂತೆ ನಂಗೆ ಸರ್ವ ಧರ್ಮಗಳ ಗುರುಗಳು ಆಶೀರ್ವಾದ ಮಾಡಿ ಬೆಂಬಲ ಸೂಚಿಸಿದ್ದಾರೆ. ಬೇರೆ ಯಾವುದೇ ಮುಖ್ಯ ಮಂತ್ರಿಗಳಿಗೆ ಇಷ್ಟೊಂದು ಬೆಂಬಲ ಸಿಕ್ಕಿಲ್ಲ ಎಂದು ಹೇಳಿದರು.
ನನ್ನ ಪರವಾಗಿ ಯಾವುದೇ ನಾಯಕರು, ಕಾರ್ಯಕರ್ತರು ಪ್ರತಿಭಟನೆ ಮಾಡಬೇಡಿ. ಪಕ್ಷದಲ್ಲಿ 75 ವರ್ಷ ವಯಸ್ಸಿನ ವರೆಗೆ ಮಾತ್ರವೇ ಅವಕಾಶವಿದ್ದರೂ ಪಕ್ಷ ನಂಗೆ ಇನ್ನೂ ನಾಲ್ಕು ವರ್ಷ ಹೆಚ್ಚಿನ ಅಧಿಕಾರ ನಡೆಸುವ ಅವಕಾಶ ನೀಡಿದೆ ಎಂದು ತಿಳಿಸಿದರು.