ಬೆಂಗಳೂರಿನಲ್ಲಿ ಇತ್ತೀಚಗೆ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆಸ್ಪತ್ರೆಯ ಬಿಲ್ ಪಾವತಿ ಮಾಡುವ ಮೂಲಕ ಬ್ಯಾಟರಾಯನಪುರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ಇದನ್ನು ಓದಿ –ನಾಗಮಂಗಲ : ದಂಡಿನ ದೇವಿ ಗ್ರಾಮದ ದೇವಸ್ಥಾನದ ನಗ ನಾಣ್ಯ ದೋಚಿದ್ದ ಮೂವರು ಕಳ್ಳರ ಬಂಧನ – ಎಎಸ್ಪಿ
ಕಳೆದ ವಾರ ಬೈಕ್ ಗೆ ಕಸದ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ ವಿಜಯಕಲಾ ಮೃತ ಪಟ್ಟಿದ್ದರು. ಒಂದು ವಾರದ ನಂತರ ಯೋಗೇಂದ್ ರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಬ್ಯಾಟರಾಯನಪುರ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ರೂಪ ಹಡಗಲಿ , ಆಸ್ಪತ್ರೆಗೆ ಪ್ರತಿದಿನ ಭೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡುತ್ತಿದ್ದರು.
ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ತಬ್ಬಲಿಯಾಗಿದ್ದರು.
ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಸಂಚಾರಿ ಠಾಣೆಯ ಡಿಸಿಪಿ. ಇನ್ಸ್ ಪೆಕ್ಟರ್ ಆಸ್ಪತ್ರೆಯ ಒಟ್ಟು ಬಿಲ್ 5 ಲಕ್ಷ ಪಾವತಿ ಮಾಡಿಸಿ ಜೀರೋ ಬ್ಯಾಲೆನ್ಸ್ ಮಾಡಿಸಿದ್ದಾರೆ. ಪೋಲಿಸ್ ಈ ಮಾನವೀಯ ಗುಣಗಳನ್ನು ಮೆಚ್ಚಲೇಬೇಕು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು