ದುಡ್ಡು ಎಸೆದ ಮಹಿಳೆ ರಜ್ಮಾ ಹಾಗೂ ಆಕೆಯ ಸಹೋದರಿ ಬಿಸ್ಮಿಲ್ಲಾ ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೋರಿದ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
ನೀವು ನಮ್ಮ ಸಲುವಾಗಿ ಬಂದಿದ್ರೀ ಸರ್. ವೈಯಕ್ತಿಕ ಹಣ ಕೊಟ್ಟಿದ್ರಿ, ಆದ್ರೆ ನಾನು ನಮಗೆ ದುಡ್ಡು ಬೇಡ, ನ್ಯಾಯ ಬೇಕು ಎಂದು ನಿಮ್ಮ ಕಾರ್ ಬಳಿ ಬಂದೆವು. ಈ ವೇಳೆ ನಿಮ್ಮ ಕಾರು ಮುಂದೆ ಹೋದ ಪರಿಣಾಮ ನಮ್ಮ ಸಹೋದರಿ ಜಾರಿದ್ದರಿಂದ ದುಡ್ಡು ಕೆಳಗೆ ಬಿದ್ದಿತು ಎಂದು ಹೇಳಿದ್ದಾರೆ.
ಬಿಸ್ಮಿಲ್ಲಾ ಮಹಿಳೆ ಕೆರೂರು ಘರ್ಷಣೆಯಲ್ಲಿ ಗಾಯಗೊಂಡ ನಾಲ್ವರು ಸಹೋದರರ ಪೈಕಿ, ಮಹಮ್ಮದ್ ಹನೀಫ್ ಪತ್ನಿ.
ಕೆರೂರು ಗಲಭೆ ನಂತರ ನಡೆದ ಹಲ್ಲೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಭೇಟಿ ಮಾಡಿ, ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ‘ಚೆಸ್ ಬೋರ್ಡ್ʼನಂತೆ ಕಂಗೊಳಿಸುತ್ತಿದೆ ತಮಿಳುನಾಡಿನ ನೇಪಿಯರ್ ಸೇತುವೆ
ಈ ವೇಳೆ ಮುಸ್ಲಿಂ ಮಹಿಳೆ ನಮಗೆ ನ್ಯಾಯ ಬೇಕು. ದುಡ್ಡು ಬೇಡ ಎಂದು ಹೇಳಿದ್ದರೂ ಸಿದ್ದರಾಮಯ್ಯ ಬಲವಂತವಾಗಿ ದುಡ್ಡು ನೀಡಿದ್ದರು. ಅಲ್ಲಿಂದ ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು.
ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಆದರೆ ಇಲ್ಲಿಗೆ ಸುಮ್ಮನಾಗದ ಮಹಿಳೆ ರಾಜ್ಮ ಅವರು ಕಾರಿನ ಹಿಂದೆ ಹೋಗಿ ಹಣವನ್ನು ಬಿಸಾಕಿದ್ದಳು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು