ಗ್ರಾಮ ಪಂಚಾಯತಿಗೆ ಪತ್ನಿ ಅವಿರೋಧ ಆಯ್ಕೆ: ಪತಿ ನೇಣಿಗೆ ಶರಣು

Team Newsnap
0 Min Read

ಗ್ರಾಮ ಪಂಚಾಯಿತಿಗೆ ಪತ್ನಿ ಅವಿರೋಧ ವಾಗಿ ಆಯ್ಕೆಯಾದ ಪತಿ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜ ನಗರದಲ್ಲಿ ಜರುಗಿದೆ.

ದೊಡ್ಡರಾಯನಗರ ವಾಸಿ ನಿಂಗರಾಜು ( 27) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವರು.

ಪತ್ನಿ ಗಗನ ಗ್ರಾಮ ಪಂಚಾಯತಿಗೆ ಅವಿರೋಧವಾಗಿ ಆಯ್ಕೆಯಾದರು. ಮರುದಿನ ಗೆಳೆಯರಿಗೆ ನಿಂಗರಾಜು ಪಾರ್ಟಿ ಕೊಟ್ಟಿದ್ದಾರೆ.

ಈ ಪಾರ್ಟಿ ಮುಗಿಸಿಕೊಂಡು ಬಂದ ನಂತರ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾನೆ.


ನಾಲ್ಕು ವರ್ಷಗಳ ಹಿಂದೆ ಮದುವೆ ಯಾಗಿರುವ ನಿಂಗರಾಜು ಮಕ್ಕಳಾಗಲಿಲ್ಲ ಎಂಬ ಕೊರಗೂ ಇತ್ತು. ಈ ಕಾರಣಕ್ಕಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Share This Article
Leave a comment