ಅವನೂರು ಬಿಟ್ಟು ಬಂದವನಲ್ಲ
ಅಪ್ಪನೋ ತಾತ ಮುತ್ತಾತನೋ
ಬಿಟ್ಟವರಂತೆ ; ಕಟ್ಟಿಕೊಂಡನಿವ
ಅವರು ಬಿಟ್ಟೂರ ಹೆಸರ
ಮಗ ಮಗನ ಮಗ ಹೀಗೆ
ಕಾಣದೂರಿನ ಕೊಂಡಿ
ಜೋಡಿಸಿಕೊಂಡವರೇ
ಅಲ್ಲೆಲ್ಲೋ ಇದೆಯಂತೆ ನಮ್ಮೂರು
ಮನೆ ಜಮೀನು ಸಂಬಂಧಿಕರು
ಅಲ್ಲಿಲ್ಲವೆಂದು ಹಲುಬಿದ್ದಳು ಅಜ್ಜಿ
ಎಳವಿನಲಿ ಕನಸಿಗೆ ಬಣ್ಣಕಟ್ಟಿ
ಊರ ನಡುವಿನ ಸೀನೀರ ಭಾವಿ
ಪಕ್ಕದಲಿ ಭವ್ಯ ನರಸಿಂಹನ ಗುಡಿ
ಹದವಾದ ಮಳೆ ಊರಾಚೆ ಗದ್ದೆ
ವಿಸ್ತಾರ ನದಿ ಬಯಲು ಕಣ್ಣ್ಮನಕೆ
ಆನಂದದ ಮುಗಿಲು ತಪ್ಪದ ಸೆಳೆತ
ಹೋಗೋಣವೊಮ್ಮೆ ನಮ್ಮೂರಿಗೆ
ಹೆಸರುಳಿದ ಬೇರುಭಾಗ್ಯದ ಸನಿಹ
ಗಿಜಿಬಿಜಿ ಬಜಾರಿನಲಿ ನರಸಿಂಹ
ಬತ್ತಿದ ಭಾವಿ ಹಚ್ಚೆಪಚ್ಚೆ ಮಚ್ಚೆ
ಕರುಳು ಬಳ್ಳಿಗಳಿಲ್ಲದ ಅನಾಥ
ಮಗ ಹೇಳಿದ
“ನಮ್ಮೂರಿಗೆ ಮುಂದಿನ ಬಸ್ಸು ಯಾವುದು”
…. ಬೆಂ ಶ್ರೀ ರವೀಂದ್ರ
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment