ನನ್ನ ಹೆಂಡತಿ ಸೌಂದರ್ಯ ನಡುವೆ ಯಾವುದೇ ಗಲಾಟೆ ಇರಲಿಲ್ಲ. ನಾವಿಬ್ಬರೂ. ತುಂಬಾ ಅನ್ಯೋನ್ಯವಾಗಿದ್ದೆವು.
ಎಂದು ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಯಡಿಯೂರಪ್ಪನ ಮೊಮ್ಮಗಳು ಡಾ. ಸೌಂದರ್ಯಳ ಪತಿ ಡಾ. ನೀರಜ್ ಪೋಲೀಸರ ಮುಂದೆ ಇಂದು ಹೇಳಿಕೆ ನೀಡಿದ್ದಾರೆ.
ಸೌಂದರ್ಯಳನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಸಾಕಷ್ಟು ವರ್ಷಗಳಿಂದ ಸೌಂದರ್ಯ ಕುಟುಂಬ ಹಾಗೂ ನಮ್ಮ ಕುಟುಂಬ ಪರಿಚಯ ಇತ್ತು. ನನ್ನ ದೊಡ್ಡಪ್ಪನ ಮೂಲಕ ಸೌಂದರ್ಯ ಕುಟುಂಬ ಆತ್ಮೀಯವಾಗಿತ್ತು. ಮದುವೆಗೂ ಮುನ್ನವೇ ನನಗೆ ಸೌಂದರ್ಯ ಪರಿಚಯ ಇತ್ತು. ಇಬ್ಬರು ಕೂಡ ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ಡಾ ನೀರಜ್ ಹೇಳಿದ್ದಾರೆ.
2018ರಲ್ಲಿ ಮದುವೆ ಆಗಿತ್ತು. ಹೆಚ್ಚಿನ ಸಂದರ್ಭದಲ್ಲಿ ಸೌಂದರ್ಯ ತಾಯಿಯ ಮನೆಯಲ್ಲಿ ಇರುತ್ತಿದ್ದಳು. ಬಳಿಕ ಆಕೆ ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ನಾನು ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ಇಬ್ಬರಿಗೂ ಹತ್ತಿರವಾಗಲಿ ಅಂತ ಮೌಂಟ್ ಕಾರ್ಮೆಲ್ ಬಳಿ ಮನೆ ಮಾಡಿಕೊಂಡೆವು.
ಸೌಂದರ್ಯ ಆಸೆಯಂತೆ ಕಳೆದ ತಿಂಗಳು ಕಿಯಾ ಕಾರನ್ನೂ ಗಿಪ್ಟ್ ಮಾಡಿದ್ದೆ. ಕಳೆದ ತಿಂಗಳು ನಾನು ದುಬೈಗೆ ಹೋದಾಗಲೂ ಸಂತೋಷವಾಗಿದ್ದಳು. ಮನೆಯಲ್ಲಿ ಜಗಳ ಯಾವುದೂ ನಡೆದಿರಲಿಲ್ಲ. ಆದರೆ ನಾನು ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ.
ನನಗೆ ವಿಚಾರ ಗೊತ್ತಾದ ಬಳಿಕ ಮನೆಗೆ ಹೋದೆ. ಬಾಗಿಲು ತೆರೆಯದೇ ಇದ್ದಾಗ ಬಾಲ್ಕನಿ ಮೂಲಕ ಒಳಗೆ ಹೋಗಿ ಬಾಗಿಲು ತೆರೆದೆವು. ಈ ವೇಳೆ ಸೌಂದರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಳು. ಕೆಳಗೆ ಇಳಿಸಿದಾಗ ಉಸಿರಾಟ ಇನ್ನೂ ಇತ್ತು. ನಾನು ಬದುಕಿಸುವ ಪ್ರಯತ್ನ ಮಾಡಿದೆ.
ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷೆ ಮಾಡಿದರು. ಐಸಿಯೂ ಅಲ್ಲಿ ಪ್ರಯತ್ನ ಮಾಡಿದ್ರು. ಆದರೆ ಅಷ್ಟರಲ್ಲಿ ಸೌಂದರ್ಯ ಪ್ರಾಣ ಹೋಗಿದೆ ಎಂದು ಪೊಲೀಸರ ಮುಂದೆ ನೀರಜ್ ವಿವರವಾದ ಹೇಳಿಕೆ ನೀಡಿದ್ದಾರೆ.
- ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
- ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
- ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
- ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
- ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
- ರಾಜ್ಯದ ಹವಾಮಾನ ವರದಿ (Weather Report) 21-05-2022
More Stories
ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ
BBMP ಗೆ 9 ವಾರದೊಳಗೆ ಚುನಾವಣೆ ನಡಸುವಂತೆ ಸುಪ್ರೀಂ ಆದೇಶ
ಅವಕಾಶ ಸಿಕ್ಕಾಗ ಖಂಡಿತಾ ಮಂಡ್ಯಕ್ಕೆ ಹೋಗುವೆ – ಸನ್ನಿಲಿಯೋನ್