ಮೈಸೂರಿನ ಯುವಕನೊಬ್ಬ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿ ಜಲ ಸಮಾಧಿಯಾದ ಘಟನೆ ಪಾಂಡವಪುರ ತಾಲ್ಲೂಕಿನ ಕೆರೆತಣ್ಣುರು ಕೆರೆಯಲ್ಲಿ ಭಾನುವಾರ ನಡೆದಿದೆ.
ಮೈಸೂರು ನಿವಾಸಿ ಸೈಯದ್ ಜಾಕಿರ್ ರವರ ಮಗನಾದ ಮಹಮ್ಮದ್ ತಂಜೀಮ್(20) ಇಂದು ಸುಮಾರು 4.30 ಗಂಟೆ ಸಮಯದಲ್ಲಿ ಸ್ನೇಹಿತರ ಜೊತೆಗೂಡಿ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತರಾಗಿರಬಹುದು ಎನ್ನಲಾಗಿದೆ.
ಪಾಂಡವಪುರ ಪೊಲೀಸ್ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಶವ ಪತ್ತೆ ಯಾಗಿಲ್ಲ. ಶೋಧನೆ ಕಾರ್ಯ ಮುಂದುವರೆದಿದೆ.