ಪೋಲಿ ಹುಡುಗರ ಜೊತೆ ಸೇರಿ ಮಗ ಹಾಳಾಗುತ್ತಾನೆಂದು ಮನೆಯಲ್ಲಿ ಇಟ್ಟು ಕೊಂಡರೆ, ಗೃಹಬಂಧನದಿಂದ ತಪ್ಪಿಸಿಕೊಂಡ ಆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಜೆ ಪಿ ನಗರದಲ್ಲಿ ಜರುಗಿದೆ.
ಬಯೋಡೆಟಾ ಕಾಪಿ ತರುತ್ತೇನೆ ಎಂದು ಮನೆಯಿಂದ ಹೊರಟ ಯುವಕರೊಬ್ಬರು ತಮ್ಮದೇ ಮತ್ತೊಂದು ಮನೆಯಲ್ಲಿ ಯೋಗೇಶ್ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜೆಪಿ ನಗರದ ನಿವಾಸಿ ಯೋಗೇಶ್ ಪಿಯುಸಿ ಅರ್ಧಕ್ಕೆ ನಿಲ್ಲಿಸಿದ್ದನು. ಕೆಲವು ಪೋಲಿ ಯುವಕರ ಸಹವಾಸ ಮಾಡಿದ್ದನು.
ನಂಜನಗೂಡು ಠಾಣೆಯಲ್ಲಿ ಯಾವುದೋ ಹಳೆ ಪ್ರಕರಣ ಬಾಕಿಯಿತ್ತು. ಇದರಿಂದ ಮನೆಯಿಂದ ಹೊರಹೋಗಲು ಪೋಷಕರು ಬಿಡುತ್ತಿರಲಿಲ್ಲ.
ಬುಧವಾರ ಮಧ್ಯಾಹ್ನ ಬಯೋಡೆಟಾ ತರುತ್ತೇನೆ ಎಂದು ಮನೆಯಿಂದ ಹೊರಟ ಯುವಕ ಸಂಜೆಯಾದರೂ ಮನೆಗೆ ಹಿಂದಿರುಗದೇ, ತಮ್ಮದೇ ಇನ್ನೊಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ