ಎಲ್‌ಆರ್‌ಎಸ್ ಪುತ್ರ ಜೆಡಿಎಸ್ ಸೇರ್ಪಡೆಗೆ ವರಿಷ್ಠರ ಒಪ್ಪಿಗೆ

Team Newsnap
1 Min Read

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್ ಗೌಡ ಜೆಡಿಎಸ್ ಸೇರ್ಪಡೆಗೆ ಆ ಪಕ್ಷದ ವರಿಷ್ಠರ ಸಮ್ಮತಿ ದೊರೆತಿದೆ.


ಚೇತನ್ ಗೌಡ ಈ ವಿಷಯ ತಿಳಿಸಿದ್ದಾರೆ. ಕೆಲವು ದಿವಸಗಳಲ್ಲೇ ಮಂಡ್ಯ ನಾಯಕರ ಸಮಕ್ಷಮದಲ್ಲಿ ಜೆಡಿಎಸ್‌ಗೆ ಸೇರುತ್ತೇನೆ. ತಂದೆ, ಮಗ ಬೇರೆ ಬೇರೆ ಪಕ್ಷದಲ್ಲಿದ್ದಾರೆ ಎಂಬ ಟೀಕೆಗಳಿವೆ. ಅದರಿಂದ ಹೊರಬರಬೇಕು. ತಂದೆಯವರ ಮಾರ್ಗದರ್ಶನದಂತೆ ಸಾಗುತ್ತೇನೆ. ಮುಂದೆ ಪಕ್ಷದ ವರಿಷ್ಠರ ಆಶೀರ್ವಾದ ಪಡೆದು ಜಿಲ್ಲಾಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಚೇತನ್ ಗೌಡ ವಿವರಿಸಿದ್ದಾರೆಂದು ವರದಿಯಾಗಿದೆ.


ಚೇತನ್‌ಗೌಡ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಚಿವ ಆರ್. ಅಶೋಕ್ ಎದುರು ಸ್ಪರ್ಧಿಸಿ ಸೋತಿದ್ದರು. ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಜಿಪಂ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.
ಚೇತನ್ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

Share This Article
Leave a comment