ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದ ತನಿಖೆ ಮುಂದುವರೆದಂತೆ ಕ್ಷಣ ಕ್ಷಣಕ್ಕೂ ಬಿಗ್ ಟ್ವಿಸ್ಟ್ ಸಿಗುತ್ತಾ ಇದೆ.ಬೆಂಗಳೂರಿನ ಬೆಳ್ಳಂದೂರು ಬಳಿ ಪತ್ತೆಯಾದ ಕಾರಿನ ಯಾವುದೇ ಡೋರ್ ಗಳ ಗ್ಲಾಸ್ ಒಡೆದಿಲ್ಲ. ಜೊತೆಗೆ ಯುವತಿಯೊಬ್ಬಳ ವೇಲ್ ( ದುಪ್ಪಟ್ಟ) ಪತ್ತೆ ಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಈ ಕಾರಣಕ್ಕಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ತನಿಖಾ ಅಧಿಕಾರಿಗಳನ್ನು ಕಾಡುತ್ತಿವೆ.
ನವೆಂಬರ್ 25ರಂದು ಅಪಹರಣಕ್ಕೀಡಾಗಿದ್ದ ವರ್ತೂರು ಪ್ರಕಾಶ್, ವಾರದ ಬಳಿಕ ಬೆಂಗಳೂರಿನಲ್ಲಿ ಬಂದು ದೂರು ದಾಖಲಿಸುತ್ತಾರೆ. ಇದೂ ಕೂಡಾ ಹಲವು ಶಂಕೆಗೆ ಕಾರಣವಾಗಿದೆ. ಅಲ್ಲದೇ ವರ್ತೂರು ಪ್ರಕಾಶ್ ಕಾರು ಬೆಂಗಳೂರಿನ ಬೆಳ್ಳಂದೂರು ಬಳಿ ನಿನ್ನೆ ಪತ್ತೆ ಪತ್ತೆಯಾಗಿದೆ.
ಇದೀಗ ಆ ಕಾರಿನಲ್ಲಿ ಯುವತಿಯ ದುಪ್ಪಟ್ಟ ಮಾದರಿಯ ಬಟ್ಟೆ ಸಿಕ್ಕಿರುವುದು ಇನ್ನಷ್ಟು ಅನುಮಾನ ಗಳನ್ನು ಹೆಚ್ಚಿಸಿದೆ.ವರ್ತೂರು ಪ್ರಕಾಶ್ ಹೇಳಿರುವ ಪ್ರಕಾರ, ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಒಡೆದು, ಹಲ್ಲೆ ನಡೆಸಿ, ತನಗೆ ಮಂಕಿ ಕ್ಯಾಪ್ ಹಾಕಿ ಕಿಡ್ನ್ಯಾಪ್ ಮಾಡಿದ್ದಾರೆ ಎಂದಿದ್ದರು.
ಆದರೆ ಪತ್ತೆಯಾಗಿರುವ ಕಾರಿನ ಯಾವುದೇ ಗಾಜು ಒಡೆದಿಲ್ಲ ಎನ್ನಲಾಗಿದೆ. ಇದೇ ವೇಳೆ ಕಾರಿನಲ್ಲಿ ವೇಲ್ ಮಾದರಿಯ ಬಟ್ಟೆ ಸಿಕ್ಕಿರುವುದು ವರ್ತೂರು ಅವರನ್ನು ಹನಿ ಟ್ರ್ಯಾಪ್ ಮೂಲಕ ಬಲೆಗೆ ಕೆಡವಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಎಂಬ ಶಂಕೆ ಮೂಡಿದೆ. ಕಿಡ್ನ್ಯಾಪ್ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಆರಂಭವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಗೊತ್ತಾಗಲಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ