ಮಂಗಳೂರು ಬಳಿಯ ಸುರತ್ಕಲ್ನ ಎನ್ಐಟಿಕೆ ಬೀಚ್ನಲ್ಲಿ ಭಾನುವಾರ ಇಬ್ಬರು ಯುವತಿಯರು ನೀರು ಪಾಲಾದ ಘಟನೆ ಜರುಗಿದೆ.
ಮಂಗಳೂರಿನ ನಿವಾಸಿಗಳಾದ ತ್ರಿಷಾ ಮತ್ತು ವೈಷ್ಣವಿ ಎಂದು ಗುರುತಿಸಲಾಗಿದೆ.
ಕಡಲತೀರದಲ್ಲಿ ಕುಟುಂಬ ಸದಸ್ಯರೊಂದಿಗೆ ನೀರಿಗಿಳಿದು ಸ್ನಾನ ಮಾಡುತ್ತಿದ್ದ ವೇಳೆ ಬೃಹತ್ ಅಲೆಯಿಂದ ಕೊಚ್ಚಿಹೋದರು.
ಸ್ಥಳೀಯ ಈಜುಗಾರರು ಮತ್ತು ಬೀಚ್ ಗಸ್ತು ಅಧಿಕಾರಿ ರಕ್ಷಣೆ ಮಾಡಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು.