ಅಂತಾರಾಷ್ಟ್ರೀಯ

ಇಂದು ಭಾರತಕ್ಕೆ ಯುಕೆ ಪ್ರಧಾನಿ ಬೋರಿಸ್ ಭೇಟಿ – ಪ್ರವಾಸದ ವಿವರ ಹೀಗಿದೆ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ (ಏಪ್ರಿಲ್ 21) ದಂದು ಗುಜರಾತ್‌ಗೆ ಭೇಟಿ ನೀಡುವುದರ ಮೂಲಕ ಭಾರತ ಭೇಟಿ ಆರಂಭಿಸಲಿದ್ದಾರೆ.

ನಂತರ ಜಾನ್ಸನ್ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಮುಕ್ತ ವ್ಯಾಪಾರ, ಇಂಧನ ಕ್ಷೇತ್ರ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ನಿರ್ಧಾರದ ಬಗ್ಗೆ UK ಪ್ರಧಾನಿ ಈ ಭೇಟಿ ಮಹತ್ವದ್ದಾಗಿದೆ.

UK ಪಿಎಂ ಜಾನ್ಸನ್ ಗುರುವಾರ ತಮ್ಮ ಇಡೀ ದಿನವನ್ನು ಗುಜರಾತ್‌ನಲ್ಲಿ ಕಳೆಯಲಿದ್ದಾರೆ ರಾತ್ರಿ ಊಟದ ನಂತರ ಅವರು ದೆಹಲಿಗೆ ತೆರಳಲಿದ್ದಾರೆ.

ಈ ಹಿಂದೆ ಪಿಎಂ ಜಾನ್ಸನ್ ಅವರ ಭಾರತದ ಭೇಟಿ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು ಆದರೆ ಕೋವಿಡ್ ಕಾರಣ, ಭೇಟಿಯನ್ನು ರದ್ದುಗೊಳಿಸಲಾಯಿತು.

ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಬ್ರಿಟನ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಬ್ರಿಟನ್ ಮಾತ್ರ ಮಾಸ್ಕೋದ ಯುದ್ದ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದೆ ಮತ್ತು ಹಲವಾರು ನಿರ್ಬಂಧಗಳನ್ನು ವಿಧಿಸಿದೆ ಅಲ್ಲದೇ ಯುಕೆ ಕೂಡ ಮಿಲಿಟರಿ ಸಹಾಯಕರನ್ನು ಉಕ್ರೇನ್‌ಗೆ ಕಳುಹಿಸಿದೆ. ಪ್ರಧಾನಿ ಜಾನ್ಸನ್ ಸ್ವತಃ ಯುದ್ಧ ಪೀಡಿತ ದೇಶಕ್ಕೆ ಭೇಟಿ ನೀಡಿದ್ದಾರೆ.

ಮತ್ತೊಂದೆಡೆ, ಭಾರತವು ಇಲ್ಲಿಯವರೆಗೆ ತಟಸ್ಥವಾಗಿದೆ, ಯುದ್ಧವನ್ನು ನಿಲ್ಲಿಸಲು ರಾಜತಾಂತ್ರಿಕ ಪರಿಹಾರವು ಪ್ರಮುಖವಾಗಿದೆ ಎಂದು ಹೇಳಿದೆ.

ಗುಜರಾತ್‌ನ ಕಾರ್ಯಕ್ರಮ ಏನು ?

ಅಹಮದಾಬಾದ್‌ನಲ್ಲಿರುವ ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ಬ್ರಿಟನ್ ಪ್ರಧಾನಿ ತಂಗಲಿದ್ದಾರೆ. ಪಿಎಂ ಜಾನ್ಸನ್ ಅವರೊಂದಿಗೆ ಹಲವಾರು ಇತರ ಪ್ರತಿನಿಧಿಗಳು ಸಹ ಬರುತ್ತಿದ್ದಾರೆ.

PM ಜಾನ್ಸನ್‌ಗೆ ತಾತ್ಕಾಲಿಕ ವೇಳಾಪಟ್ಟಿ:

  • ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಬೆಳಗ್ಗೆ 8.05ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
  • ಬ್ರಿಟಿಷ್ ಪ್ರಧಾನಿಗೆ ಭವ್ಯವಾದ ಸ್ವಾಗತವನ್ನು ಯೋಜಿಸಲಾಗಿದೆ. ಸಾಂಪ್ರದಾಯಿಕ ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ವಿವಿಧ ಪ್ಯಾಂಡಲ್‌ಗಳನ್ನು ತಯಾರಿಸಲಾಗುತ್ತದೆ.
  • ಆಗಮನದ ನಂತರ, PM ಜಾನ್ಸನ್ ಹೋಟೆಲ್‌ಗೆ ಹೋಗಬಹುದು ಅಥವಾ ನೇರವಾಗಿ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಬಹುದು.
  • ಪಿಎಂ ಜಾನ್ಸನ್ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿಯನ್ನು ಭೇಟಿಯಾಗುವ ಸಾಧ್ಯತೆಯಿದೆ.
  • ಇಲ್ಲಿಂದ, ಹೆಲಿಕಾಪ್ಟರ್ ಮೂಲಕ, ಪಿಎಂ ಜಾನ್ಸನ್ ಜೆಸಿಬಿ ಕಂಪನಿ ಫ್ಯಾಕ್ಟರಿ ಭೇಟಿಗಾಗಿ ವಡೋದರಾಕ್ಕೆ ಭೇಟಿ ನೀಡಲಿದ್ದಾರೆ
  • ವಡೋದರಾದಿಂದ ಹಿಂದಿರುಗಿದ ನಂತರ ಅವರು ಗಾಂಧಿನಗರಕ್ಕೆ ಭೇಟಿ ನೀಡಲಿದ್ದಾರೆ.
  • ಗಾಂಧಿನಗರದಲ್ಲಿ, ಅವರು ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಅವರು ಗುಜರಾತ್ ಬಯೋಟೆಕ್ನಾಲಜಿ ವಿಶ್ವವಿದ್ಯಾನಿಲಯದ ನಿರ್ಮಾಣ ಹಂತದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳಿಗೆ ಭೇಟಿ ನೀಡಲಿದ್ದಾರೆ.

200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಗುತ್ತಿದೆ. ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣದಲ್ಲಿ UK ಮತ್ತು ಭಾರತದ ನಡುವೆ ಆಳವಾದ ಮತ್ತು ಹೆಚ್ಚು ಅರ್ಥಪೂರ್ಣ ಪಾಲುದಾರಿಕೆಗೆ ಆದ್ಯತೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಇದು ಭಾರತ ಮತ್ತು ಯುಕೆಯಾದ್ಯಂತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಂತರರಾಷ್ಟ್ರೀಯ ಸಹಯೋಗಕ್ಕೆ ಮಹತ್ವದ ಅವಕಾಶವನ್ನು ಎತ್ತಿ ತೋರಿಸುತ್ತದೆ.

Team Newsnap
Leave a Comment
Share
Published by
Team Newsnap

Recent Posts

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024