ರಾಜ್ಯ ಸರ್ಕಾರವು ಬಿ.ಸಿ ಮತ್ತು ಡಿ ಗ್ರೂಪ್ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿ ದೆ. ಸಚಿವರಿಗೆ ಒಂದು ತಿಂಗಳ ಕಾಲ ವರ್ಗಾವಣೆಯ ಅಧಿಕಾರವನ್ನೂ ನೀಡಲಾಗಿದೆ.
ಜುಲೈ 22 ರಂದೇ ಸಾರ್ವತ್ರಿಕ ವರ್ಗಾವಣೆ ಮುಕ್ತಾಯಗೊಂಡಿದೆ, ಸಿಎಂ ಅನುಮೋದನಗೆ ವರ್ಗಾವಣೆ ಕೋರಿ ಸಾಕಷ್ಟು ಅರ್ಜಿಗಳು ಬರುತ್ತಿವೆ. ಇದರಿಂದಾಗಿ ಇಲಾಖೆ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಕನಿಷ್ಠ ಸೇವಾವಧಿಯನ್ನು ಪೂರೈಸಿದ ನೌಕರರನ್ನು ಲಭ್ಯವಿರುವ ಖಾಲಿ ಹುದ್ದೆಗಳಿಗೆ ವರ್ಗಾವಣೆಗೆ ಅನುಮೋದಿಸಲು ಸಚಿವರು ಅಧಿಕಾರ ಹೊಂದಿರುತ್ತಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮುಂದಿನ ಸಾರ್ವತ್ರಿಕ ವರ್ಗಾವಣೆಯ ತನಕ ಯಾವುದೇ ಅವಧಿ ಪೂರ್ವ ವರ್ಗಾವಣೆ ಮಾಡುವಂತಿಲ್ಲ ಹಾಗೂ ಅವಧಿಪೂರ್ವ ವರ್ಗಾವಣೆಗಳನ್ನು ಕೋರಿ ಯಾವುದೇ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸುವಂತಿಲ್ಲ ಎನ್ನಲಾಗಿದೆ.