ಬೆಂಗಳೂರಿನ ನೈಸ್ ರಸ್ತೆಯಲ್ಲಿ ದುರಂತ : ಕಾರಿಗೆ ಬೆಂಕಿ -ವ್ಯಕ್ತಿ ಸಜೀವ ದಹನ

Team Newsnap
1 Min Read

ಕಾರೊಂದು ನಡು ರಸ್ತೆಯಲ್ಲೇ ಹೊತ್ತಿಉರಿದ ಪರಿಣಾಮ ವ್ಯಕ್ತಿಯೊಬ್ಬ ಸಜೀವವಾಗಿ ದಹನವಾಗಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ತಡ ರಾತ್ರಿಯ ನಂತರ ಜರುಗಿದೆ.

car fir

ನೈಸ್ ರಸ್ತೆಯ ಚನ್ನಸಂದ್ರ ಬಳಿ ಸಂಭವಿಸಿದ ಈ ಘಟನೆ ಯಲ್ಲಿ ದರ್ಶನ್ (40) ಸುಟ್ಟು ಕರಕಲಾಗಿದ್ದಾರೆ.

ಈ ಘಟನೆ ನಡೆದ ನಂತರ ಚನ್ನಸಂದ್ರ ಗ್ರಾಮಸ್ಥರು ನೈಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಮಾಹಿತಿ ಮುಟ್ಟಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಆರ್ ಆರ್ ನಗರದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಈ ಘಟನೆಯ ಬಗ್ಗೆ ಅನುಮಾನವಿದೆ. ತನಿಖೆ ನಡೆದಿದೆ. ದರ್ಶನ್ ಕುಟುಂಬದವರಿಗೆ ಮಾಹಿತಿ ಮುಟ್ಟಿಸಿದ್ದೇವೆ ಎಂದು ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸವಿತಾ ತಿಳಿಸಿದ್ದಾರೆ.

Share This Article
Leave a comment